ಪುಂಜಾಲಕಟ್ಟೆ: ಸ.ಪ್ರ.ದ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಚಾರಣ ಮತ್ತು ಪಾರಂಪರಿಕ ತಾಣ ಭೇಟಿ

0

ಪುಂಜಾಲಕಟ್ಟೆ: ರಾಷ್ಟ್ರೀಯ ಸೇವಾ ಯೋಜನೆ 1 ಮತ್ತು 2 ಇದರ ವತಿಯಿಂದ ಮಾ.15ರಂದು ಚಾರಣ ಮತ್ತು ಪಾರಂಪರಿಕ ತಾಣ ಭೇಟಿ ಕಾರ್ಯಕ್ರಮವನ್ನು “ಕೊಣಾಜೆ ಕಲ್ಲು” ಹಾಗು “ಸಾವಿರ ಕಂಬದ ಬಸದಿ” ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪಾರಂಪರಿಕ ತಾಣ ಭೇಟಿಯ ಜೊತೆಗೆ ಅಲ್ಲಿನ ವಿಶೇಷತೆ ಹಾಗು ಇತಿಹಾಸವನ್ನು ಅಲ್ಲಿನ ಮಾರ್ಗದರ್ಶಕರು ತಿಳಿಸಿದರು.

ಮಧ್ಯಾಹ್ನದ ಭೋಜನವನ್ನು ಕೊಡ್ಯಡ್ಕ ದೇವಸ್ಥಾನದಲ್ಲಿ ಸೇವಿಸಿದರು.

ಎಲ್ಲಾ ಸ್ವಯಂಸೇವಕರು ಉತ್ಸಾಹ ಭರಿತರಾಗಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಹಿಂದಿರುಗಿದರು.

ಎಲ್ಲಾ ಸ್ವಯಂಸೇವಕರು, ಪದಾಧಿಕಾರಿಗಳು ಹಾಗು ಯೋಜನಾಧಿಕಾರಿಗಳಾದ ಪ್ರೊ.ಸಂತೋಷ್ ಪ್ರಭು, ಪ್ರೊ.ಚಿತ್ರಾ ಪಡಿಯಾರ್ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here