ಹಾರಬೆ ದುಗಲಾಯ ಮತ್ತು ಗುಳಿಗ ದೈವದ ವಾರ್ಷಿಕ ನೇಮೋತ್ಸವ ಪ್ರಯುಕ್ತ ಗಣಹೋಮ, ನಾಗ ತಂಬಿಲ ಸೇವೆ

0

ಪಾರೆಂಕಿ: ಮಡಂತ್ಯಾರು ಸಮೀಪದ ಶ್ರೀ ರಾಮ ನಗರ ಹಾರಬೆ ದುಗಲಾಯ ಮತ್ತು ಗುಳಿಗ ದೈವಗಳ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಗಣಹೋಮ ನಾಗ ದೇವರೀಗೆ ನಾಗ ತಂಬಿಲ ಸೇವೆ ಮಹಾಪೂಜೆ ಪ್ರಸಾದ ವಿತರಣೆ‌ ಸಾರ್ವಜನಿಕ‌ ಅನ್ನಸಂತರ್ಪಣೆ ಜರಗಿತು.

ಮಾ 14 ರಂದು ಮಾಲಾಡಿ ಅಂತರ ಮಂಜುನಾಥ ಭಟ್‌ ಅಸ್ರಣ್ಣರು ವಿದಿ ವಿಧಾನಗಳೊಂದಿ ಪೂಜಾ‌‌ ಕಾರ್ಯಕ್ರಮವನ್ನು ನೆರವೇರಿಸಿದರು.
ನೇಮೋತ್ಸವ ಸಮಿತಿ ಅಧ್ಯಕ್ಷ ಸುದೀರ್ ಪೂಜಾರಿ ಹಾರಬೆ, ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ ಹಾರಭೆ, ಪ್ರಧಾನ ಕಾರ್ಯದರ್ಶಿ ಚೇತನ್ ಪೂಜಾರಿ, ಕೋಶಾಧಿಕಾರಿ ಹರಿನಾಕ್ಷಿ ಮತ್ತು ಸಮಿತಿ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

ಸಾಯಂಕಾಲ ಸತ್ಯನಾರಾಯಣ ಪೂಜೆ ವಿಧ್ಯಾ ಸರಸ್ವತಿ ಭಜನಾ ಮಂಡಳಿ ಪಾರೆಂಕಿ ಇವರಿಂದ ಭಜನಾ ಕಾರ್ಯಕ್ರಮ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಂತರ ದೈವಗಳ ನೇಮೋತ್ಸವ ಜರಗಲಿದೆ.

LEAVE A REPLY

Please enter your comment!
Please enter your name here