ತಣ್ಣೀರುಪಂತ ಘಟಕದ ಶೌರ್ಯ ವಿಪತ್ತು ನಿರ್ವಹಣೆಯ ಮಾಸಿಕ ಸಭೆ

0

ತಣ್ಣೀರುಪಂತ: ತಣ್ಣೀರುಪಂತ ಘಟಕದ ಶೌರ್ಯ ವಿಪತ್ತು ನಿರ್ವಹಣೆಯ ಮಾಸಿಕ ಸಭೆ ಮಾ.5ರಂದು ಸ್ವಯಂಸೇವಕ ಜಯಾನಂದ ಅಧ್ಯಕ್ಷತೆಯಲ್ಲಿ ಕಲ್ಲೇರಿ ಬಾಪೂಜಿ ಕೇಂದ್ರದಲ್ಲಿ ಜರಗಿತು.

ವೇದಿಕೆಯಲ್ಲಿ ಶೌರ್ಯ ವಿಪತ್ತು ನಿರ್ವಹಣೆಯ ಯೋಜನಾಧಿಕಾರಿ ಜೈವಂತ್ ಪಟಗಾರ್ ಸ್ವಯಂಸೇವಕರು ಘಟಕವನ್ನು ಬಲಪಡಿಸುವುದರ ಕುರಿತು ಮಾಹಿತಿ ನೀಡಿದರು.

ವಿಪತ್ತು ನಿರ್ವಹಣೆಯ ಸ್ವಯಂಸೇವಕ ವಿನೋದ್ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ವಿದ್ಯಾನಂದಕುಮಾರ್ ವಂದಿಸಿದರು.

ವಿಪತ್ತು ನಿರ್ವಹಣೆಯ ಸಂಯೋಜಕ ಶಿವರಾಮ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here