ಅಯೋಧ್ಯಾ ಶ್ರೀ ರಾಮ ಪ್ರತಿಷ್ಠಾಪನ ದಿನದಂದು ಬೆಳಕಿಲ್ಲದ ಮನೆಗೆ- ವಿ.ಹಿಂ.ಪ ನೆರಿಯ ಘಟಕದ ವತಿಯಿಂದ ಸೋಲಾರ್ ಲೈಟ್ ಅಳವಡಿಕೆ

0

ನೆರಿಯ: ಗ್ರಾಮದ ಅಂಬಟೆಮಲೆ ಪ್ರದೇಶದ ವಿದ್ಯುತ್ ಸೌಲಭ್ಯ ಇಲ್ಲದ ಒಂಟಿ ಮಹಿಳೆ ಲಕ್ಷ್ಮೀ ಎಂಬಾಕೆಯ ಮನೆಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ನೆರಿಯ ಗ್ರಾಮ ಸಮಿತಿ ವತಿಯಿಂದ ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರತಿಷ್ಠಾ ದಿನದ ಪ್ರಯುಕ್ತ ಸೋಲಾರ್ ದೀಪ ಅಳವಡಿಸಿ ಕೊಡಲಾಯಿತು ಮತ್ತು ಒಂದು ತಿಂಗಳಿಗೆ ಬೇಕಾಗುವ ಅಕ್ಕಿ ದಿನಸಿ ವಸ್ತುಗಳನ್ನು ನೀಡಲಾಯಿತು.

ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಗ್ರಾಮ ಸಮಿತಿ ಅಧ್ಯಕ್ಷರಾದ ಮಹೇಶ್ ಅಣಿಯೂರು, ಕಾರ್ಯದರ್ಶಿ ಪ್ರಕಾಶ್ ಅಣಿಯೂರು, ದೀಕ್ಷಿತ್ ನೆರಿಯ ಹಾಗು ಹರಿಣಾಕ್ಷಿ ನವೀನ್ ನೆರಿಯ ಇವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here