ಅನುಗ್ರಹ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಕರಾಟೆ ಸ್ಫರ್ಧೆಯಲ್ಲಿ ಪ್ರಶಸ್ತಿ

0

ಉಜಿರೆ: ಯಾಮೊಟೊ ಶೂಟೊಕಾನ್ ಕರಾಟೆ ಅಸೋಸಿಯೇಷನ್ ಟ್ರಸ್ಟ್(ರಿ) ಮಂಗಳೂರು ವತಿಯಿಂದ ಸ್ಪರ್ಶ ಕಲಾ ಮಂದಿರ ಬಿ.ಸಿ ರೋಡ್, ಬಂಟ್ವಾಳ ದ.ಕ ಇಲ್ಲಿ ಜ.14ರಂದು ನಡೆದ 2ನೇ ಆಹ್ವಾನಿತ ರಾಜ್ಯ ಮಟ್ಟದ ಕರಾಟೆ ಸ್ಫರ್ಧೆಯಲ್ಲಿ ಅನುಗ್ರಹ ಶಾಲಾ ವಿದ್ಯಾರ್ಥಿಗಳಿಗೆ ಹಲವಾರು ಪ್ರಶಸ್ತಿಗಳು ದೊರೆತಿವೆ.

ಸತ್ಯಾರ್ಥಾ, ತರುಣ್ ಹರ್ಷಿಲ್ ಹಾಗೂ ಝಕೀರ್ ಕಟಾ ವಿಭಾಗದಲ್ಲಿ ದ್ವಿತೀಯ, ಕುಮಿಟೆಯಲ್ಲಿ ತೃತೀಯ.ಸುಬಿನ್ ಹಾಗೂ ಸ್ವರೂಪ್ ಕಟಾ ವಿಭಾಗದಲ್ಲಿ ದ್ವಿತೀಯ.ವಿಶ್ವಾಸ್, ಪೂಜಿತ್ ಹಾಗೂ ರಿಟೇಶ್ ಕಟಾ ವಿಬಾಗದಲ್ಲಿ ಪ್ರಥಮ, ಕುಮಿಟೆಯಲ್ಲಿ ಪ್ರಥಮ ಮತ್ತು ತೃತೀಯ.ಮಹಮ್ಮದ್ ಶಫೀಕ್ ಕಟಾ ವಿಭಾಗದಲ್ಲಿ ತೃತೀಯ ಹಾಗೂ ಶ್ರೀಜಿತ್ ಕುಮಿಟೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಇವರನ್ನು ಶಾಲಾ ಸಂಚಾಲಕರು, ಪ್ರಾಂಶುಪಾಲರು ಹಾಗೂ ಶಿಕ್ಷಕವೃಂದದವರು ಅಭಿನಂದಿಸಿರುತ್ತಾರೆ.

LEAVE A REPLY

Please enter your comment!
Please enter your name here