ಇಂದಬೆಟ್ಟು: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠೆ- ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ವಿಶೇಷ ದೇವತಾ ಕಾರ್ಯ

0

ಇಂದಬೆಟ್ಟು: ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳಿಂದ ವಿಶೇಷ ದೇವತಾ ಕಾರ್ಯಗಳು ನಡೆದವು.

ಬೆಳಿಗ್ಗೆಯಿಂದ ಶ್ರೀ ಅರ್ಧನಾರೀಶ್ವರ ಮಕ್ಕಳ ಭಜನಾ ತಂಡ ಇಂದಬೆಟ್ಟು, ವಿಘ್ನೇಶ್ವರ ಭಜನಾ ತಂಡ ಬೆದ್ರಬೆಟ್ಟು ಹಾಗೂ ಊರವರಿಂದ ಭಜನಾ ಕಾರ್ಯಕ್ರಮ ನಡೆಯಿತು.ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ನೇರಪ್ರಸಾರ ಕಾರ್ಯಕ್ರಮವನ್ನು ಟಿವಿ ಪರದೆಯ ಮೂಲಕ ವೀಕ್ಷಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.ಭಕ್ತಾದಿಗಳಿಂದ ಶ್ರೀ ರಾಮತಾರಕ ಪಠಣೆ ನಡೆಯಿತು.ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀ ಅರ್ಧನಾರೀಶ್ವರ ದೇವರಿಗೆ ವಿಶೇಷವಾಗಿ ಏಕಾದಶ ರುದ್ರಾಭಿಷೇಕ ಸೇವೆ ನಡೆಯಿತು.ಇಂದಬೆಟ್ಟು ಗ್ರಾಮದಿಂದ ಕರಸೇವೆಯಲ್ಲಿ ಭಾಗವಹಿಸಿದ ಕರಸೇವಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.ದೇವಸ್ಥಾನದ ಪ್ರಧಾನ ಅರ್ಚಕರಿಂದ ಉತ್ತರಾಭಿಮುಖವಾಗಿ ಶ್ರೀರಾಮ ದೇವರಿಗೆ ಆರತಿ ಬೆಳಗಿ ರಾಮರಾಜ್ಯದ ಸಂಕಲ್ಪ ಮಾಡಲಾಯಿತು.

ಪ್ರಸಾದ ರೂಪದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಶ್ರೀರಾಮ ಭಕ್ತರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿ ದೇವತಾನುಗ್ರಕೆ ಪಾತ್ರರಾದರು, ದೇವಸ್ಥಾನದ ಆಡಳಿತ ಮಂಡಳಿ, ವಿಶ್ವ ಹಿಂದೂ ಪರಿಷತ್, ವಿವಿಧ ಸಂಘ ಸಂಸ್ಥೆಗಳು, ಊರವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

LEAVE A REPLY

Please enter your comment!
Please enter your name here