ದಾನಿಗಳ ನೆರವಿನಿಂದ ರೂ.8.90ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಗೃಹ ಬಿಷಪ್ ಪೀಟರ್ ಪೌಲ್ ಸಲ್ಡಾನ ರವರಿಂದ ಹಸ್ತಾಂತರ

0

ಕಲ್ಮoಜ: ಕಲ್ಮಂಜ ಗ್ರಾಮದ ಹುಣಿಪಾಜೆಯ ಅಸಿಸ್ಸಿ ವಾಳೆಯ ಫ್ರಾನ್ಸಿಸ್ ಕುಟುಂಬಕ್ಕೆ ಮಂಗಳೂರು ಸಿಓಡಿಪಿಯಿಂದ ರೂ.2.50ಲಕ್ಷ, ಪುತ್ತೂರಿನ ಮೈಕಲ್ ಡಿಸೋಜ ರೂ 1.50ಲಕ್ಷ ಮತ್ತು ಉಜಿರೆ ಸಂತ ಅಂತೋನಿ ಚರ್ಚ್ ಹಾಗೂ ಇನ್ನಿತರ ದಾನಿಗಳಿಂದ ಸಂಗ್ರಹಿಸಿದ ರೂ.8.90ಲಕ್ಷ ಅನುದಾನದಲ್ಲಿ ನಿರ್ಮಿಸಿದ ನೂತನ ಗೃಹ ಪ್ರವೇಶವು ಜ.21ರಂದು ನೆಡೆಯಿತು.

ಉದ್ಘಾಟನೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಪೀಟರ್ ಪೌಲ್ ಸಲ್ಡಾನ ಉದ್ಘಾಟಿಸಿ ಆಶೀರ್ವಚನ ನೆರವೇರಿಸಿದರು.

ಈ ಸಂದರ್ಭ ದಲ್ಲಿ ಉಜಿರೆ ಸಂತ ಅಂತೋನಿ ಚರ್ಚ್ ಪ್ರಧಾನ ಧರ್ಮಗುರು ವ.ಫಾ.ಜೇಮ್ಸ್ ಡಿಸೋಜಾ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವ.ವಿಜಯ್ ಲೋಬೊ, ದಯಾಳ್ ಭಾಗ್ ಆಶ್ರಮದ ಧರ್ಮಗುರು ವ.ಫಾ.ಪೆಡ್ರಿಕ್ಸ್ ಬ್ರ್ಯಾಗ್ಸ್, ಬಿಷಪ್ ರ ಕಾರ್ಯದರ್ಶಿ, ಉಜಿರೆ ಚರ್ಚ್ ಪಾಲನಾ ಪರಿಷತ್ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ವಾಳೆಯ ಗುರಿಕಾರ, ಚರ್ಚ್ ಪಾಲನಾ ಪರಿಷತ್ ಸದಸ್ಯರು, ಆರ್ಥಿಕ ಸಮಿತಿ ಸದಸ್ಯರು, ದಾನಿಗಳು ಉಪಸ್ಥಿತರಿದ್ದರು. ಲಿಗೋರಿ ವಾಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here