ಸುಲ್ಕೇರಿ ನಿವಾಸಿ ನವೀನರವರ ವೈದ್ಯಕೀಯ ನೆರವಿಗೆ- ನಮ ಮಾತೆರ್ಲ ಒಂಜೇ ಕಲಾತಂಡ ಅರುವದಿಂದ ಧನಸಹಾಯ ಹಸ್ತಾಂತರ

0

ಸುಲ್ಕೇರಿ: ಡಿ.18ರಂದು ನಮ ಮಾತೆರ್ಲ ಒಂಜೇ ಕಲಾತಂಡ ಅರುವ ಇದರ ಮುಂದಾಳತ್ವದಲ್ಲಿ ನಡೆದ ಬಯಲಾಟ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದಲ್ಲಿ ಉಳಿಕೆ ಅದ ಹಣವನ್ನು ಸುಲ್ಕೇರಿ ಗ್ರಾಮದ ಮುಡಿಪಿರೆ 5 ಸೆನ್ಸ್ ನಿವಾಸಿ ಅದ ಸಂಜೀವರವರ ಮಗ ನವೀನ ಇವರಿಗೆ ವೈದ್ಯಕೀಯ ನೆರವಿಗಾಗಿ ಅಳದಂಗಡಿಯ ಸತ್ಯದೇವತೆಯ ಸನ್ನಿದಾನದಲ್ಲಿ ನೀಡಲಾಯಿತು.

ಇವರು ಸುಮಾರು 10 ವರುಷ ಗಳಿಂದ ಅನಾರೋಗ್ಯದಿಂದ ಬಳಲುತಿದ್ದು ಪ್ರಸ್ತುತ ಈಗ ಉಜಿರೆ ಎಸ್.ಡಿ.ಎಂ ಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.ಹಾಗೂ ನಾವರ ಗ್ರಾಮದ ರಾಜಪಾದೆ ನಿವಾಸಿ ಆದ ವಿಶ್ವನಾಥ ಪೂಜಾರಿಯವರ ಮಗನಾದ ಕೀರ್ತನ ಇವರಿಗೆ ವೈದ್ಯಕೀಯ ನೆರವಿಗಾಗಿ ಅಳದಂಗಡಿಯ ಸತ್ಯದೇವತೆಯ ಸನ್ನಿದಾನದಲ್ಲಿ ನೀಡಲಾಯಿತು.ಇವರು ಸುಮಾರು 5 ವರುಷಗಳಿಂದ ಅನಾರೋಗ್ಯದಿಂದ ಬಳಲುತಿದ್ದಾರೆ.

ಈ ಸಂದರ್ಭದಲ್ಲಿ ತಂಡದ ಗೌರವ ಅಧ್ಯಕ್ಷರಾದ ಡಾ.ಎನ್.ಎಮ್ ತುಳುಪುಳೆ ಹಾಗೂ ನಮ ಮಾತೆರ್ಲ ಒಂಜೇ ಕಲಾ ತಂಡದ ಸರ್ವ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here