ಬಂದಾರು: ಪೆರ್ಲ-ಬೈಪಾಡಿಯಲ್ಲಿ ನೂತನ ಶಾಖಾ ಅಂಚೆ ಕಚೇರಿ ಉದ್ಘಾಟನೆ

0

ಬಂದಾರು: ಗ್ರಾಮ ಪಂಚಾಯತ್ ಬಂದಾರು ಹಾಗೂ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಯೋಗದೊಂದಿಗೆ ಬಂದಾರು ಗ್ರಾಮದ ಪೆರ್ಲ -ಬೈಪಾಡಿ ಬಸ್ ನಿಲ್ದಾಣ ದ ಬಳಿ ಪಂಚಾಯತ್ ಕಟ್ಟಡದಲ್ಲಿ ನೂತನ ಶಾಖಾ ಅಂಚೆ ಕಚೇರಿ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ನವೀನ್ ಚಂದರ್, ಸೀನಿಯರ್ ಸೂಪರಿಂಟೆಂಡೆಂಟ್ ಪೋಸ್ಟ್ ಆಫೀಸರ್ ಪುತ್ತೂರು ವಿಭಾಗ ಇವರು ಕಚೇರಿ ಉದ್ಘಾಟನೆ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಂದಾರು ಗ್ರಾಮ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ ಇವರು ತಮ್ಮ ದೇಣಿಗೆಯನ್ನು ಕಳೆಂಜ ನಂದಗೋಕುಲ ಗೋಶಾಲೆಯ ಸೇವಾಶ್ರಮಕ್ಕೆ ನೂತನ ಕಚೇರಿಯ ಮೊದಲ ಹಣ ವರ್ಗಾವಣೆ ಮಾಡುವ ಮೂಲಕ ಚಾಲನೆ ನೀಡಿದರು.ತಮ್ಮ ನಿವೃತ್ತಿ ಜೀವನಕ್ಕೆ ಪಾದಾರ್ಪಣೆಗೊಳ್ಳಲಿರುವ ಪುತ್ತೂರು ವಿಭಾಗ ಸೀನಿಯರ್ ಸೂಪರಿಂಟೆಂಡೆಂಟ್ ಪೋಸ್ಟ್ ಆಫೀಸರ್ ನವೀನ್ ಚಂದರ್ ಹಾಗೂ ಸಹಕರಿಸಿದ ಶರ್ಮ, ದಿನೇಶ್ ಗೌಡ ಅಡ್ಡಾರು, ಇವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಯಾಮಣಿ, ಬಂದಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾವತಿ ಬರಮೇಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಚಂದ್ರ ನಾಯ್ಕ ಅಸಿಸ್ಟೆಂಟ್ ಸೂಪರಿಟೆಂಡೆಂಟ್ ಪೋಸ್ಟ್ ಆಫೀಸರ್ ಪುತ್ತೂರು ವಿಭಾಗ, ಮೋಹನ್ ಬಿ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಆಫೀಸರ್, ಕಾರ್ಕಳ ಉಪ ವಿಭಾಗ, ಸುಜಯ್ ಅಂಚೆ ನಿರೀಕ್ಷಕರು ಬೆಳ್ತಂಗಡಿ, ಬಂದಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯರಾದ ಪರಮೇಶ್ವರಿ ಕೆ ಗೌಡ, ಸದಸ್ಯರಾದ ಭಾರತಿ ಕೊಡಿಯೇಲು, ಅನಿತಾ ಕೆ, ಕುರುಡಂಗೆ, ಸುಚಿತ್ರ ಮುರ್ತಾಜೆ, ಪೆರ್ಲ-ಬೈಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಉಮೇಶ್ ಗೌಡ ಅಂಗಡಿಮಜಲು, ಉಪಾಧ್ಯಕ್ಷೆ ಯಮುನಾ ಯಾನೆ ಜ್ಯೋತಿ, ಸ್ಥಾಪಕಾಧ್ಯಕ್ಷರು ಹಾಲಿ ನಿರ್ದೇಶಕರಾದ ಬಾಲಕೃಷ್ಣ ಗೌಡ ಪಾಪುದಡ್ಕ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಮಹಾಬಲ ಗೌಡ ನಾಗಂದೋಡಿ ಇವರುಗಳು ಉಪಸ್ಥಿತರಿದ್ದರು.

ಸ್ವಾಗತ ಪ್ರಾರ್ಥನೆ ಧನ್ಯವಾದ ನಿರೂಪಣೆ ನೆರವೇರಿಸಿದರು.ಆಧಾರ್ ನೋಂದಣಿ, ತಿದ್ದುಪಡಿ, ಜನಸಂಪರ್ಕ ಅಭಿಯಾನ, ಅಂಚೆ ಇಲಾಖೆಯ ನೂತನ ಖಾತೆ ಹಾಗೂ ವಿವಿಧ ಸೌಲಭ್ಯದ ಮಾಹಿತಿ ಜೊತೆಗೆ ನೋಂದಣಿ ಕಾರ್ಯದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here