ಕಕ್ಕಿಂಜೆ ಸರಕಾರಿ ಪ್ರೌಢಶಾಲೆಯಲ್ಲಿ ಜಮೀಯತುಲ್ ಫಲಾಹ್ ವತಿಯಿಂದ ಪರೀಕ್ಷಾ ಪೂರ್ವ ತರಬೇತಿ

0

ಬೆಳ್ತಂಗಡಿ: ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ವತಿಯಿಂದ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ‌ ಪರೀಕ್ಷಾ ಪೂರ್ವ ತರಬೇತಿ ಶಿಬಿರವು ಕಕ್ಕಿಂಜೆ ಸರಕಾರಿ‌ ಪ್ರೌಢಶಾಲೆಯಲ್ಲಿ ಜರುಗಿತು.

ಮುಖ್ಯೋಪಾಧ್ಯಾಯ ರವಿ ಕುಮಾರ್ ಪ್ರಾಸ್ತಾವಿಕ ಬಾಷಣ‌ ಮಾಡಿದರು.

ಸಮಾರಂಭದ ಅದ್ಯಕ್ಷತೆಯನ್ನು ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಹಾಜಿ ಬಿ ಶೇಕುಂಞಿ ವಹಿಸಿದ್ದರು.ಶಿಬಿರದ ಉದ್ದೇಶ ಮತ್ತು ಮಹತ್ವದ ಬಗ್ಗೆ ಉಮರ್ ಕುಂಞಿ ನಾಡ್ಜೆ, ಮುಹಮ್ಮದ್ ಉಜಿರೆ,ಎಸ್,ಎಂ ಕೋಯಾ ಮಾತಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಯಾಕುಬ್ ನಡ, ಜಗನ್ನಾಥ್, ಮಹೇಂದ್ರ ಇವರುಗಳು ವಿದ್ಯಾರ್ಥಿಗಳಿಗೆ ಒಂದು ದಿನದ ಶಿಬಿರ ನಡೆಸಿಕೊಟ್ಟರು.

ಸದಸ್ಯರಾದ ಅಬ್ಬಾಸ್ ಎಸ್.ಕೆ ಉಪಸ್ಥಿತರಿದ್ದರು.ಶಿವ ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿ, ಸಾವಿತ್ರಿ ಸ್ವಾಗತಿಸಿ, ಜಯಾ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here