ಕಳೆಂಜ: ಕಲ್ಲಗುಡ್ಡೆ ನಿವಾಸಿ ರಾಮು ಬಾವಿಗೆ ಹಾರಿ ಮೃತ್ಯು

0

ಕಳೆಂಜ: ಸದಾಶಿವೇಶ್ವರ ದೇವಾಲಯ ಸಮೀಪದ ಕಲ್ಲಗುಡ್ಡೆ ನಿವಾಸಿ ರಾಮು (35ವ)ಎಂಬವರು ಪತ್ನಿಯೊಂದಿಗೆ ಜಗಳವಾಡಿ ಬಾವಿಗೆ ಹಾರಿರುವ ಘಟನೆ ಡಿ.19 ರ ತಡರಾತ್ರಿ 12.15 ರ ಹೊತ್ತಿಗೆ ನಡೆದಿದೆ.

ತಕ್ಷಣ ಮಾಹಿತಿ ತಿಳಿದ ಸ್ಥಳೀಯರು ಬಾವಿಗೆ ಇಳಿಯುವ ನಿಪುಣರು ಇಲ್ಲದ ಕಾರಣ ಶೌರ್ಯ ವಿಪತ್ತು ತಂಡವನ್ನು ಸಂಪರ್ಕಿಸಿದ್ದಾರೆ.

ಅರಸಿನಮಕ್ಕಿ-ಶಿಶಿಲ ಘಟಕದ ಶೌರ್ಯ ವಿಪತ್ತು ತಂಡದ ಸದಸ್ಯರಾದ ಅವಿನಾಶ್ ಭಿಡೆ ಮತ್ತು ರಮೇಶ್ ರವರು ಸ್ಥಳೀಯರ ಸಹಾಯದಿಂದ ಮೃತ ದೇಹವನ್ನು ಮೇಲೆತ್ತಿದ್ದಾರೆ.

ಸ್ಥಳಕ್ಕಾಗಮಿಸಿದ ಧರ್ಮಸ್ಥಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here