ಕೊಲ್ಲಿ ದೇವಸ್ಥಾನದಲ್ಲಿ ಕಾಂಕ್ರೀಟಿಕರಣ ರಸ್ತೆ ಉದ್ಘಾಟನೆ-ಮನೆ ಮನೆಯಿಂದ ತಂದ ಅಡಿಕೆ ಸಮರ್ಪಣೆ-ಮುಖ ಮಂಟಪಕ್ಕೆ ಶಂಕುಸ್ಥಾಪನೆ

0

ಕೊಲ್ಲಿ: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನಲೆಯಲ್ಲಿ ದೇವಸ್ಥಾನದ ಸಮೀಪದ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.

ದೇವಾಲಯಕ್ಕೆ ಮನೆ ಮನೆಗಳಿಂದ ಅಡಕೆ ಸಂಗ್ರಹಣಾ ಅಭಿಯಾನದಡಿ ಸಂಗ್ರಹಿಸಿದ ಅಡಕೆಯನ್ನು ದೇವರಿಗೆ ವಿಶೇಷ ಮೆರವಣಿಗೆಯೊಂದಿಗೆ ಸಮರ್ಪಿಸಲಾಯಿತು.ಇದೇ ವೇಳೆ, ದೇವಾಲಯದ ಮುಖ ಮಂಟಪಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಶಾಸಕ ಹರೀಶ್ ಪೂಂಜ ಭಾಗಿಯಾಗಿದ್ದರು.ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ‌.ಲೋಕೇಶ್ ರಾವ್, ಬ್ರಹ್ಮ‌ಕಲಶೋತ್ಸವ ಸಮಿತಿಯ ಅಧ್ಯಕ್ಷ ಬಿ.ಕೆ.ಧನಂಜಯ ರಾವ್, ಗ್ರಾ.ಪಂ.ಅಧ್ಯಕ್ಷ ವಿನಯಚಂದ್ರ ಗೌಡ, ಮಲವಂತಿಗೆ ಗ್ರಾ.ಪಂ.ನ ಪ್ರಕಾಶ್ ಜೈನ್, ಸದಸ್ಯರಾದ ದಿನೇಶ್, ಆಡಳಿತಾಧಿಕಾರಿ ಮೋಹನ್ ಬಂಗೇರ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ವಾಸುದೇವರಾವ್ ಕಕ್ಕೇನೇಜಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here