ಕೊಕ್ರಾಡಿ: ಮಹಮ್ಮಾಯಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾಟ, ಗಣ್ಯರಿಗೆ ಸನ್ಮಾನ

0

ಕುತ್ಲೂರು: ಮಹಮ್ಮಾಯಿ ಫ್ರೆಂಡ್ಸ್ ಕ್ಲಬ್ ಕೊಕ್ರಾಡಿ ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಅಸೋಸಿಯೇಷನ್ ಇದರ ಸಹಭಾಗಿತ್ವದೊಂದಿಗೆ ಮರಾಟಿ ಸಮಾಜ ಬಾಂಧವರ ಮತ್ತು ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬ್ಬಡ್ಡಿ ಪಂದ್ಯಾಟವು ಡಿ.10ರಂದು ಕುತ್ಲೂರು ಶಾಲಾ ಮೈದಾನದಲ್ಲಿ ಸ್ವಲ್ಪ ಸಮಯ ನಡೆದು ನಂತರ ವರುಣ ಆರ್ಭಟಕ್ಕೆ ಅಡ್ಡಿಯಾಗಿ ಹತ್ತಿರದ ಇಂಡೊರ್ ಹಾಲಿನಲ್ಲಿ ಉಳಿದ ಪಂದ್ಯಗಳು ನಡೆದವು.

ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರ ಮತ್ತು ಕ್ರೀಡಾ ಕ್ರೀಡಾಳುಗಳ ಸಮ್ಮುಖದಲ್ಲಿ ಬೆಳ್ತಂಗಡಿಯ ನೋಟರಿ ವಕೀಲ ಸಂತೋಷ್ ಕುಮಾರ್ ನಾಯ್ಕ ಮತ್ತು ಅವರ ಧರ್ಮಪತ್ನಿಯಾದ ಮಂಗಳೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಸೌಮ್ಯಲತ ಸಂತೋಷ್ ಅವರನ್ನು‌ ಶಾಲು ಹೊದಿಸಿ ಸನ್ಮಾನಿಸಿದರು.

ಸಭಾ ಕಾರ್ಯಕ್ರಮದಲ್ಲಿ ಮರಾಟಿ ಸಮಾಜ ಸೇವಾ ಸಂಘ (ರ) ಬೆಳ್ತಂಗಡಿ ಇದರ ಅಧ್ಯಕ್ಷ ಉಮೇಶ್ ನಾಯ್ಕ, ನೆರಿಮೊಗೇರು ಮರಾಟಿ ಸಂಘದ ಸಂಸ್ಥಾಪಕರಾದ ಮಹಾಲಿಂಗ ನಾಯ್ಕರು, ಮಹಮ್ಮಾಯಿ ಫ್ರೆಂಡ್ಸ್ ಸಂಘಟನೆಯ ಅಧ್ಯಕ್ಷ ಸತೀಶ್ ನಾಯ್ಕರವರು, ಆರ್.ಪಿ ಕೌಡಿಚ್ಚಾರು ಹಾಗೂ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here