ಸುಲ್ಕೇರಿ ಅಂಗನವಾಡಿಯ ಹಳೆ ವಿದ್ಯಾರ್ಥಿನಿ ಪೋಷಕರಿಂದ ಸಾವಯವ ತರಕಾರಿ ಗಿಡಗಳ ಹಸ್ತಾಂತರ

0

ಸುಲ್ಕೇರಿ: ಸುಲ್ಕೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 15 ಪುಟಾಣಿ ಮಕ್ಕಳಿದ್ದು, ಈ ಪುಟಾಣಿ ಮಕ್ಕಳ ಬಿಸಿ ಊಟಕ್ಕೆ ಪೂರಕವಾಗುವಂತೆ 15 ಸಾವಯವ ತರಕಾರಿಗಳ ಗಿಡಗಳನ್ನು ಅಂಗನವಾಡಿಯ ಹಳೆ ವಿದ್ಯಾರ್ಥಿನಿ ಮಾನ್ಯ ವಿ. ಯ ಪೋಷಕರಾದ ವಿಶ್ವನಾಥ ಪೂಜಾರಿ ಅಂಗನವಾಡಿಯ ಶಿಕ್ಷಕಿ ಸುಜಾತ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸುಲ್ಕೇರಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ನಾರಾಯಣ್ ಪೂಜಾರಿ, ಬಿಲ್ಲವ ಸಂಘದ ನಿರ್ದೇಶಕ ವಸಂತ ಪೂಜಾರಿ, ಅಂಗನವಾಡಿ ಸಹಾಯಕ ವಿಮಲ ಹಾಗೂ ಪೋಷಕರಾದ ಸುಮಿತ್ರ ಹಾಗೂ ಪುಟಾಣಿ ಮಕ್ಕಳಾದ ಪ್ರಣ್ಯ, ಹೃದಯ್, ಆಚಿಂತ್ಯ, ಮನ್ವಿತ್, ತೇಜಸ್, ಶ್ರೇಯನ್, ದಿಶಾನಿ, ಶ್ರಾವಣಿ, ಅರುಷಿ, ದಿಯಾ, ಮೌಶಿಕ್, ಸನ್ನಿಧಿ, ಶ್ಮಯನ್, ಆರಾಧ್ಯ, ಶ್ರೆಯನ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here