ಕೊಕ್ಕಡ: ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕೋರಿ ಜಾತ್ರೆ

0

ಕೊಕ್ಕಡ: ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕೋರಿ ಜಾತ್ರೆಯು ಬ್ರಹ್ಮಶ್ರೀ ಕೆ.ಯು.ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಡಿ.17ರಂದು ನಡೆಯಲಿದೆ.

ಬೆಳಗ್ಗೆ 8ಕ್ಕೆ ಗಣಹೋಮ,10ಕ್ಕೆ ಏಕಾದಶರುದ್ರ, ಮಧ್ಯಾಹ್ನ 12ಕ್ಕೆ ಮಹಾಪೂಜೆ ನಂತರ ದೇವರ ಗದ್ದೆಗೆ ಜಾನುವಾರಯಗಳು ಇಳಿಯುವ ಸಮಯ, ಹಾಗು ಸಾಯಂಕಾಲ 4.30ಕ್ಕೆ ದೇವರ ಉತ್ಸವ ನಡೆಯಲಿದೆ.

ಎಂ.ರಾಧಾಕೃಷ್ಣ ಎಡಪಡಿತ್ತಾಯ ಪವಿತ್ರಪಾಣಿ ಹಾಗು ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ ಹಾಗು ಅರ್ಚಕ ವೃಂದ, ನೌಕರ ವೃಂದ ಮತ್ತು ಊರವರು ಸಹಕರಿಸಲಿರುವರು.

ಸಾಯಂಕಾಲ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.

LEAVE A REPLY

Please enter your comment!
Please enter your name here