ಪದ್ಮುಂಜ: ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಸ್ವಚ್ಛತಾ ಕಾರ್ಯ

0

ಕಣಿಯೂರು: ವಿಶ್ವ ಹಿಂದೂ ಪರಿಷತ್, ಬಜರಂಗದಳ ಪದ್ಮುಂಜ ಶಾಖೆಯ ವತಿಯಿಂದ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣ ಮತ್ತು ಸುತ್ತಮುತ್ತ ಸ್ವಚ್ಛತಾ ಕಾರ್ಯ ನ.30ರಂದು ನಡೆಯಿತು.

ಅಧ್ಯಕ್ಷ ದಿನೇಶ್ ಶೆಟ್ಟಿ ಮಲೆಂಗಲ್ಲು, ಕಾರ್ಯದರ್ಶಿ ಪುರುಷೋತ್ತಮ ಗೌಡ, ಸಹ ಕಾರ್ಯದರ್ಶಿ ಕೃಷ್ಣ ನಾಯಕ್ ವಳಬಾವು, ಬಜರಂಗದಳ ಸಂಯೋಜಕ- ಸುನಿಲ್ ಮದಕ, ಸಹ ಸಂಯೋಜಕ ಲತೇಶ್ ಬೊಳ್ಳರಮಜಲು, ಗೋರಕ್ಷಾ ಪ್ರಮುಖ್ ಪ್ರದೀಪ್ ಶೆಟ್ಟಿ ಮಲೆಂಗಲ್ಲು, ಸತ್ಸಂಗ ಪ್ರಮುಖ್ ವಿಜಯ ಕುಮಾರ್ ಭಟ್, ಸೇವಾ ಪ್ರಮುಖ್ ರಾಜೇಶ್ ಶೆಟ್ಟಿ ಅಡೆಂಜ, ಹಾಗೂ ಸದಸ್ಯರು.

ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರ ಸುರಕ್ಷಣಾಧಿಕಾರಿಗಳಾದ ಸುನೀತಾ, ಅರ್ಚನಾ, ಲ್ಯಾಬ್ ಸಿಬ್ಬಂದಿಗಳಾದ ಯಶೋಧಾ, ಶ್ರಾವ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here