ಬಳ್ಳಮಂಜ ಶ್ರೀ ಮಹಾತೋಭಾರ ಅನಂತೇಶ್ವರ ಸ್ವಾಮಿ ದೇವಸ್ಥಾನದ ವತಿಯಿಂದ ಉಚಿತ ವೈದ್ಯಕೀಯ, ದಂತ ತಪಾಸಣಾ ಶಿಬಿರ

0

ಮಚ್ಚಿನ: ಶ್ರೀ ಮಹಾತೋಭಾರ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇದರ ಆಶ್ರಯದಲ್ಲಿ ಉಚಿತ ವೈದ್ಯಕೀಯ ಹಾಗೂ ದಂತ ತಪಾಸಣಾ ಶಿಬಿರವು ಸಮುದಾಯ ಭವನ ಬಳ್ಳಮಂಜದಲ್ಲಿ ನಡೆಯಿತು.

ಜನರಿಗೆ ಕಣ್ಣಿನ ವಿಭಾಗ, ಕಿವಿ ಮೂಗು ಮತ್ತು ಗಂಟಲು ವಿಭಾಗ, ದಂತ ಚಿಕಿತ್ಸೆ, ಸಾಮಾನ್ಯ ರೋಗ ಎಲುಬು ಮತ್ತು ಕೀಲು ರೋಗ, ಸ್ತ್ರೀ ರೋಗಗಳ ತಪಾಸಣೆಯನ್ನು ಜನರ ಪಡೆದುಕೊಂಡರು.ಜನರಿಗೆ ಉಚಿತವಾಗಿ ತಪಾಸಣೆ ಹಾಗೂ ಔಷಧಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾಕ್ಟರ್ ಹರ್ಷ ಸಂಪಿಗೆತ್ತಾಯ, ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಉಪಾಧ್ಯಕ್ಷೆ ಸೋಮಾವತಿ, ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ರಿತ್ವಿಕ್ ಜೈನ್, ಡಾಕ್ಟರ್ ಪಲ್ಲವಿ, ಡಾ.ಭವ್ಯದೀಕ್ಷ, ಡಾ.ರೋಶನಿ, ಡಾ.ಅಶ್ರಫ್, ಡಾ.ಸುಭಾನ್ಸಿ, ಡಾ.ಅವಿನಾಶ್ ಭಟ್, ಡಾ.ಜಫರ್ಸನ್, ಡಾ.ಹಾರ್ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ರವಿಚಂದ್ರ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here