ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ಹರಿದ್ವಾರ ಶಾಖಾ ಮಠದಲ್ಲಿ ವಾರ್ಷಿಕ ಉತ್ಸವ ಧಾರ್ಮಿಕ ಸಭೆ

0

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ ನಗರದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಕ್ಷೇತ್ರದ ಶಾಖಾ ಮಠ ಉತ್ತರಾ ಖಂಡದ ದೇವ ಭೂಮಿ ಹರಿದ್ವಾರ ಶಾಖಾ ಮಠದಲ್ಲಿ ನ.25 ರಂದು 7 ನೇ ವಾರ್ಷಿಕ ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅಂತರಾಷ್ಟ್ರೀಯ ಶ್ರೀ ಪಂಚದಶನಾಮ ಜುನಾ ಅಖಾಡ ಅಧ್ಯಕ್ಷ ಮಹಾಂತ್ ಪ್ರೇಮಗಿರಿ ಮಹಾರಾಜ್, ಉಪಾಧ್ಯಕ್ಷ ಮಹಾಂತ್ ವಿದ್ಯಾನಂದ ಸರಸ್ವತಿ ಮಹಾರಾಜ್, ಮಹಾ ಮಂಡಲೇಶ್ವರ 1008ಸ್ವಾಮಿ ವಿಜ್ಞಾನ ನಂದ ಸರಸ್ವತಿ ಮಹಾರಾಜ್, ಮಂಡಲೇಶ್ವರ 1008 ಶ್ರೀ ಸ್ವಾಮಿ ಲಲಿತಾನಂದ ಗಿರಿ ಮಹಾರಾಜ್, ಜಯರಾಮ ಆಶ್ರಮದ ಅಧ್ಯಕ್ಷ ಬ್ರಹ್ಮ ಸ್ವರೂಪಿ ಬ್ರಹ್ಮಚಾರಿ ಮಹಾರಾಜ್, ಶ್ರೀ ಮಹಾಂತ್ ದೇವಾನಂದ ಸರಸ್ವತಿ ಮಹಾರಾಜ್, ಮಹಾ ಮಂಡಲೇಶ್ವರ 1008ಶ್ರೀ ಸ್ವಾಮಿ ಯಮುನಾ ಪುರಿ ಮಹಾರಾಜ್, ಮಹಾ ಮಂಡಲೇಶ್ವರ 1008 ಶ್ರೀ ಸ್ವಾಮಿ ಆನಂದ ಚೈತನ್ಯ ಸರಸ್ವತಿ ಮಹಾರಾಜ್ ಇವರುಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕರ್ನಾಟಕ ಸರಕಾರದ ಮೀನುಗಾರಿಕೆ ಮತ್ತು ಬಂದರು, ಒಳನಾಡು ಜಲ ಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಉತ್ತರ ಖಂಡದ ಮಾಜಿ ಮಂತ್ರಿ ಹಾಲಿ ಶಾಸಕ ಮದನ್ ಕೌಶಿಕ್, ಹರಿಕೃಷ್ಣ ಬಂಟ್ವಾಳ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಮುಖರಾದ ಪಿ.ಕೆ.ರಾಜು ಪೂಜಾರಿ ಕಾಶಿಪಟ್ಣ, ರಾಜೇಶ್ ಪೂಜಾರಿ ಮೂಡುಕೋಡಿ, ಮಂಗಳೂರು ಕಾರ್ಪೋರೇಟರ್ ಕಿರಣ್, ನವದೆಹಲಿ ನೆಹರು ಯೂನಿವರ್ಸಿಟಿ ಕಾಲೇಜು ಉಪನ್ಯಾಸಕ ಡಾ.ರಮೇಶ್ ಸಾಲಿಯಾನ್, ಹಿಂದೂ ಮುಖಂಡ ಪ್ರವೀಣ್ ವಾಲ್ಕೆ, ನೇಮಯ್ಯ ಕುಲಾಲ್ ವೇಣೂರು, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಆರ್.ಜೆ.ನಾಯ್ಕ ಕುಮಟಾ, ಪ್ರೀತಮ್ ಧರ್ಮಸ್ಥಳ, ಜಿತೇಶ್ ಕುಮಾರ್ ಉಡುಪಿ, ಈಶ್ವರ ನಾಯ್ಕ ಭಟ್ಕಳ, ಮಂಜುನಾಥ ನಾಯ್ಕ ಹೊನ್ನಾವರ, ನೇತ್ರಾಣಿ ಗಣೇಶ್ ಮುರ್ಡೇಶ್ವರ, ಮಂಜುನಾಥ ಎಲ್.ನಾಯ್ಕ ಕುಮುಟಾ, ರತ್ನಾಕರ ಬುಣ್ಣನ್, ತುಕಾರಾಮ ಸಾಲಿಯಾನ್ ಆರ್ಲ, ಕೃಷ್ಣಪ್ಪ ಗುಡಿಗಾರ, ರವೀಂದ್ರ ಪೂಜಾರಿ ಆರ್ಲ,ವಿವಿಧ ಮೂಲೆಗಳಿಂದ ಭಕ್ತರು, ಶ್ರೀ ರಾಮ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here