ರಾಜ್ಯ ಮಟ್ಟದ ಜಾನಪದ ಗೀತ ಗಾಯನ ಸ್ಪರ್ಧೆಯಲ್ಲಿ ವಾಣಿ ಪ.ಪೂ ಕಾಲೇಜಿನ ರೋವರ್ಸ್ ತಂಡ ಪ್ರಥಮ

0

ಬೆಳ್ತಂಗಡಿ: ನ.19ರಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ಚಿತ್ರದುರ್ಗ ಸ್ಥಳೀಯ ಸಂಸ್ಥೆಯ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಎಸ್.ಆರ್.ಎಸ್ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಕಬ್-ಬುಲ್ ಬುಲ್, ಸ್ಕೌಟ್ಸ್ – ಗೈಡ್ಸ್ ದೇಶಭಕ್ತಿ ಗೀತಗಾಯನ ಸ್ವರ್ಧೆ ಹಾಗೂ ರೋವರ್ಸ್ – ರೇಂಜರ್ಸ್ ಗಳ ಜಾನಪದ ಗೀತಗಾಯನ ಸ್ವರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಚಾಂಪಿಯನ್ ಆಗಿ ಮೂಡಿ ಬಂದಿದೆ.

ರೋವರ್ಸ್ ವಿಭಾಗದ ಸ್ಪರ್ಧೆಯಲ್ಲಿ ವಾಣಿ ಪದವಿ ಪೂರ್ವ ಕಾಲೇಜಿನ ತಂಡ ಅದ್ಭುತ ಪ್ರದರ್ಶನ ನೀಡಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

ವಿಜೇತ ವಿದ್ಯಾರ್ಥಿಗಳಾದ ದ್ವಿತೀಯ ವಾಣಿಜ್ಯ ವಿಭಾಗದ ಧನುಷ್, ಚರಣ್, ದೀಪಕ್ ಪ್ರಥಮ ವಾಣಿಜ್ಯ ವಿಭಾಗದ ಸಮನ್ವಿತ್, ಉಜ್ವಲ್, ತೇಜಸ್ ಮತ್ತು ರೋವರ್ಸ್ ಲೀಡರ್ ಬೆಳಿಯಪ್ಪ ಕೆ. ಇವರಿಗೆ ಆಡಳಿತ ಮಂಡಳಿ ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಅಭಿನಂದಿಸಿದರು.

LEAVE A REPLY

Please enter your comment!
Please enter your name here