ಕಲ್ಪತರು ನರ್ಸಿಂಗ್ ಕಾಲೇಜ್ ನಲ್ಲಿ ಲ್ಯಾಮ್ಪ್ ಲೈಟಿಂಗ್ ಮತ್ತು ಪ್ರಮಾಣ ವಚನ ಕಾರ್ಯಕ್ರಮ

0

ಬೆಳ್ತಂಗಡಿ: ಕಲ್ಪತರು ಸ್ಕೂಲ್ ಅಪ್ ನರ್ಸಿಂಗ್ ಕಾಲೇಜ್ ನಲ್ಲಿ ಲ್ಯಾಮ್ಪ್ ಲೈಟಿಂಗ್ ಮತ್ತು ಪ್ರಮಾಣ ವಚನ ಸಮಾರಂಭವು ನ.7ರಂದು ಕಾಲೇಜು ಸಭಾಂಗಣದಲ್ಲಿ ಜರಗಿತು.

ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಕಾರ್ಯಕ್ರಮ ಉದ್ಘಾಟಿಸಿದರು.ವಿದ್ಯಾರ್ಥಿಗಳಿಗೆ ಬಿಷಪ್ ಲಾರೆನ್ಸ್ ಮುಕ್ಕುಯಿ ಲ್ಯಾಮ್ಪ್ ಲೈಟಿಂಗ್ ಕಾರ್ಯಕ್ರಮ ನಡೆಸಿಕೊಟ್ಟರು.ಕಾಲೇಜು ಪ್ರಾಂಶುಪಾಲೆ ಚಂದ್ರಿಕಾ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.ಉಜಿರೆ ಎಸ್.ಡಿ.ಎಂ ಹಾಸ್ಪಿಟಲ್ ನ ನಿರ್ದೇಶಕ ಎಂ.ಜನಾರ್ಧನ, ಗಂಡಿಬಾಗಿಲು ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಯು.ಸಿ ಪೌಲೋಸ್, ನಿವೃತ್ತ ಪ್ರಾಂಶುಪಾಲೆ ಎ.ಪಿ.ಮರಿಯಮ್ಮ, ಜ್ಯೋತಿ ಹಾಸ್ಪಿಟಲ್ ನ ಮೆಡಿಕಲ್ ಸುಪರಿಡೆಂಟ್ ಡಾ.ಆನ್ ಗ್ರೇಸ್ ಎಸ್. ಡಿ., ಅಭಯ ಹಾಸ್ಪಿಟಲ್ ನ ಮೆಡಿಕಲ್ ಡೈರೆಕ್ಟರ್ ಡಾ.ಶ್ರೀಹರಿ ಭಟ್, ಬದ್ಯಾರ್ ಫಾ.ಎಲ್.ಎಂ ಪಿಂಟೊ ಹೆಲ್ತ್ ಸೆಂಟರ್ ನ ಆಡಳಿತಾಧಿಕಾರಿ ಸಿ | ಜ್ಯೋತ್ಸ್ನಾ ಉಪಸ್ಥಿರಿದ್ದರು.

ಚೇರ್ಮನ್ ಫಾ.ಜೋಸ್ ವಾಲಿಯ ಪರಂಬಿಲ್ ಸ್ವಾಗತಿಸಿದರು.ಉಪ ಪ್ರಾಂಶುಪಾಲೆ ಜೆನ್ನಿ ವಿ.ಪಿ ವಂದಿಸಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ, ಎಸ್ ಡಿ ಎಂ ಹಾಸ್ಪಿಟಲ್ ನ ನಿರ್ದೇಶಕ ಜನಾರ್ಧನ, ನಿವೃತ್ತ ಪ್ರಾಂಶುಪಾಲೆ ಮರಿಯಮ್ಮ, ಸಿಯೋನ್ ಆಶ್ರಮ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಯು.ಸಿ ಪೌಲೋಸ್, ಜ್ಯೋತಿ ಹಾಸ್ಪಿಟಲ್ ನ ಡಾ. ಆನ್ ಗ್ರೇಸ್, ಅಭಯ ಹಾಸ್ಪಿಟಲ್ ನ ಡಾ.ಶ್ರೀಹರಿ ಭಟ್, ಬದ್ಯಾರ್ ಫಾ.ಎಲ್.ಎಂ ಪಿಂಟೊ ಹೆಲ್ತ್ ಸೆಂಟರ್ ನ ಸಿ | ಜ್ಯೋಸ್ನ ಇವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here