ಉಜಿರೆ: ರಿಕ್ಷಾ ಚಾಲಕ ಮಂಜುನಾಥ ನಿಧನ

0

ಬೆಳ್ತಂಗಡಿ: ಉಜಿರೆ-ಸೋಮಂತಡ್ಕ ಆಪೇ ರಿಕ್ಷಾ ಚಾಲಕರ ಸಂಘದ ಸದಸ್ಯ ಹಾಗೂ ಈ ಮಾರ್ಗದಲ್ಲಿ ಸರ್ವಿಸ್ ನಡೆಸುತ್ತಿದ್ದ ಮಂಜುನಾಥ(49ವ) ಅಲ್ಪಕಾಲದ ಅಸೌಖ್ಯದಿಂದ ನ.1 ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮಂಜ ಎಂದೇ ಕರೆಯಲ್ಪಡುತ್ತಿದ್ದ ಕುಂದಾಪುರ ಮೂಲದವರಾದ ಇವರು 30 ವರ್ಷಗಳಿಂದ ಉಜಿರೆಯಲ್ಲಿದ್ದು, ಖಾಸಗಿ ಕ್ಲಿನಿಕ್ ಒಂದರಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿಸಿದ್ದರು.ಬಳಿಕ ಆಪೇ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು.

ಅವಿವಾಹಿತರಾಗಿದ್ದ ಅವರು ಉಜಿರೆಯ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದರು.ಅವರಿಗೆ ಸಹೋದರ, ಸಹೋದರಿಯರು ಇದ್ದಾರೆ.

LEAVE A REPLY

Please enter your comment!
Please enter your name here