ಸೋಮಂತಡ್ಕ: ಟಿಪ್ಪರ್ ಪಲ್ಟಿ

0

ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೋಮಂತಡ್ಕದ ಅರಣ್ಯ ಇಲಾಖೆಯ ವಸತಿಗೃಹಗಳ ಸಮೀಪ, ರಸ್ತೆ ಬದಿ ಟಿಪ್ಪರ್ ವಾಹನ ಪಲ್ಟಿಯಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

ಇಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಈ ವೇಳೆ ಮಣ್ಣು ಸಾಗಾಟ ನಡೆಸುತ್ತಿದ್ದ ಟಿಪ್ಪರ್, ಮಣ್ಣನ್ನು ರಸ್ತೆ ಬದಿ ಸುರಿಯುತ್ತಿದ್ದಾಗ ಮಣ್ಣು ಒಂದೇ ಬದಿಗೆ ಸರಿದ ಕಾರಣ ರಸ್ತೆ ಬದಿಯ ಚರಂಡಿಗೆ ಜಾರಿ ಪಲ್ಟಿಯಾಯಿತು

ಸನಿಹದಲ್ಲೇ ದರೆ ಇದ್ದ ಕಾರಣದಿಂದ ಟಿಪ್ಪರ್ ವಾಹನ ಅದಕ್ಕೆ ಒರಗಿದ್ದು ಸಂಪೂರ್ಣ ಮಗುಚಿ ಬೀಳುವುದು ತಪ್ಪಿದೆ.

ಘಟನೆ ವೇಳೆ ಟಿಪ್ಪರ್ ವಾಹನದಲ್ಲಿ ಚಾಲಕ ಮಾತ್ರ ಇದ್ದು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here