ಮುಗ್ಗ ಗುತ್ತು ಕುಟುಂಬಸ್ಥರ ಟ್ರಸ್ಟ್ ಗೆ ಆಯ್ಕೆ

0

ಬೆಳ್ತಂಗಡಿ: ಮುಗ್ಗ ಗುತ್ತು ಕುಟುಂಬಸ್ಥರ ಟ್ರಸ್ಟ್ ಬೆಳ್ತಂಗಡಿ ಇದರ ಮಹಾಸಭೆ ಇತ್ತೀಚೆಗೆ ಮುಗ್ಗ ಗುತ್ತು ಮನೆಯಲ್ಲಿ ಜರಗಿತು.

ಆಡಳಿತ ಮೊಕ್ತೇಸರರಾಗಿ ಮಾಜಿ ಶಾಸಕ ಕೆ.ವಸಂತ ಬಂಗೇರ, ಅಧ್ಯಕ್ಷರಾಗಿ ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್, ಕಾರ್ಯದರ್ಶಿಯಾಗಿ ನೋಟರಿ ವಕೀಲ ಭಗೀರಥ ಜಿ., ಉಪಾಧ್ಯಕ್ಷರಾಗಿ ಜಗನ್ನಾಥ ಬಂಗೇರ ನಿರ್ಮಾಲು, ಜೊತೆ ಕಾರ್ಯದರ್ಶಿಯಾಗಿ ಸೋಮನಾಥ ಬಂಗೇರ ವರ್ಪಾಳೆ, ಕೋಶಾಧಿಕಾರಿಯಾಗಿ ಶೇಖರ ಬಂಗೇರ ಹೇರಾಜೆ ಆಯ್ಕೆಯಾದರು.

ಟ್ರಸ್ಟ್ ಸದಸ್ಯರುಗಳಾಗಿ ಪದ್ಮನಾಭ ಪಾದೆ, ನವೀನ್ ಚಂದ್ರ ಕುವೆತ್ಯಾರು, ಚಂದ್ರಶೇಖರ್ ವಕೀಲರು, ದಿನೇಶ್ ಪೆದಮಲೆ, ತುಕಾರಾಮ ಬಂಗೇರ ಎಂ., ಗಿರಿಜಾ ಕೊಂಗುಜೆ, ಲಲಿತ ಕುರ್ತೋಡಿ, ಜಾನಕಿ, ಹೇಮಾ ದಾಮೋದರ ಇವರನ್ನು ನೇಮಿಸಲಾಯಿತು.

LEAVE A REPLY

Please enter your comment!
Please enter your name here