ಉಜಿರೆ: ಧರ್ಮಸ್ಥಳ ಸಿ ಗೋಪಾಲ್ ಕೃಷ್ಣ ಮೆನನ್ ಇಂಜಿನಿಯರ್ ನಿಧನ- ಹಲವು ಗಣ್ಯರಿಂದ ಸಂತಾಪ

0

ಉಜಿರೆ: ಮುಂಡತ್ತೋಡಿ ನಿವಾಸಿಯಾಗಿರುವ ಸಿ ಗೋಪಾಲ್ ಕೃಷ್ಣ ಮೆನನ್ (84) ಇವರು ಅನೇಕ ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು ಅ.16ರಂದು ಮೃತ ಪಟ್ಟಿದ್ದಾರೆ.

ಇವರು ಪ್ರತಿಷ್ಠಿತ ಧರ್ಮಸ್ಥಳ ಮಂಜುನಾಥೇಶ್ವರ ಕನ್ಸ್ಟ್ರಕ್ಷನ್ ವಿಭಾಗದಲ್ಲಿ 53 ವರ್ಷಗಳ ಕಾಲ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದು ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗದೆ ದೈವಾಧೀನರಾಗಿದ್ದಾರೆ.

ತಾಲೂಕಿನಲ್ಲಿ ಗೋಪಾಲ್ ರೈಟ್ರ್ ಎಂದು ಕರೆಯಲ್ಪಡುವ ಮೃತರು ಕೃಷಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು ಇವರು ಪತ್ನಿ ಉಷಾದೇವಿ ಮಕ್ಕಳಾದ ಸಂತೋಷ್ , ಸಂಗೀತ, ಸಂದೀಪ ಹಾಗೂ ಕುಟುಂಬದ ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here