ಉಜಿರೆ ಶ್ರೀ ಧ.ಮಂ.ಮಹಿಳಾ ಐಟಿಐ ಕಾಲೇಜಿನಲ್ಲಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ- ಬದ್ದತೆ ಇದ್ದರೆ ಸ್ವಚ್ಛತೆ ತಾನಾಗಿಯೇ ಬರುತ್ತದೆ: ಯತೀಶ್ ಕೆ

0

ಉಜಿರೆ: ಸ್ವಚ್ಛತೆ ಆಧ್ಯಾತ್ಮಿಕ ಬೆಳವಣಿಗೆಯ ಪ್ರಮುಖ ಅಂಶ. ಶುಚಿತ್ವವಿರುವುದು ಕೇವಲ ದೇಹದ ಬಗ್ಗೆಯಲ್ಲ. ಅದು ನಿಮ್ಮ ಸುತ್ತಲಿನ ಪರಿಸರದ ಬಗ್ಗೆಯೂ ಹೌದು ಮಾತ್ರವಲ್ಲ, ಮನಸ್ಸು, ಮಾತಿನ ಮೂಲಕ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಎಂದು ಶ್ರೀ ರತ್ನಮಾನಸ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಯತೀಶ್ ಕೆ ಇವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ಧ.ಮಂ.ಮಹಿಳಾ ಐಟಿಐಯಲ್ಲಿ ಗಾಂಧಿ ಜಯಂತಿ ಅಂಗವಾಗಿ ನಡೆದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರತ್ನಮಾನಸ ವಿದ್ಯಾರ್ಥಿಗಳ ದಿನಚರಿ ಮತ್ತು ಅದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸ್ವಚ್ಚತೆ ಮತ್ತು ಜೀವನ ಶಿಕ್ಷಣವನ್ನು ಕಲಿಸುವುದರ ಜೊತೆಗೆ ಬದ್ದತೆ ಮುಖ್ಯ ಬದ್ದತೆ ಇದ್ದರೆ ಸ್ವಚ್ಛತೆ ತಾನಾಗಿಯೇ ಬರುತ್ತದೆ ಆಗ ಸಮಾಜದಲ್ಲಿ ಉತ್ತಮ ಸ್ಥಾನ ಗೌರವ ಪ್ರಾಪ್ತವಾಗುತ್ತದೆ.ಈ ರೀತಿ ಸಮಾಜದಲ್ಲಿ ಉತ್ತಮ ಹೆಸರು ಪಡೆದುಕೊಂಡಿರುವ ರತ್ನಮಾನಸ ದ ಅನೇಕ ರತ್ನಗಳ ಹೆಸರನ್ನು ಉದಾಹರಣೆಯಾಗಿ ನೀಡಿದರು ಇವೆಲ್ಲ ಕಾರ್ಯಕ್ರಮಕ್ಕೆ ಪ್ರೋತ್ಸಾಹ ಸಹಕಾರ ನೀಡುತ್ತಿರುವ ಪೂಜ್ಯ ಖಾವಂದರು ಮತ್ತು ಡಾ.ಹೇಮಾವತಿ ಹೆಗ್ಗಡೆಯವರ ಬೆಂಬಲ ಅವರ್ಣನೀಯ ಎಂದು ಹೇಳಿದರು.

ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲ ವಿ.ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.ಕು.ಶಾಲಿನಿ ಡಿ ಇವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here