ಉಜಿರೆ ಕರ್ನಾಟಕ ಬ್ಯಾಂಕಿನಲ್ಲಿ ಶಾಖೆಯ 45ರ ಸಂಭ್ರಮ ಆಚರಣೆ

0

ಉಜಿರೆ: ಉಜಿರೆ ಕರ್ನಾಟಕ ಬ್ಯಾಂಕ್ ಉಜಿರೆ ಶಾಖೆಯ ಪ್ರಾರಂಭವಾಗಿ 45 ವರ್ಷದ ಸಂಭ್ರಮ ಆಚರಣೆಯನ್ನು ಆಚರಣೆ ಮಾಡಲಾಯಿತು.ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉಜಿರೆಯ ಯುವ ಉದ್ಯಮಿ ಗೋಕುಲ್ ದಾಸ್ ಭಂಡಾರ್ಕರ್ ಉದ್ಘಾಟಿಸಿದರು.

ಗ್ರಾಹಕ ಪ್ರತಿನಿಧಿಗಳಾದ ಉಜಿರೆಯ ಸುಪ್ರಿತಾ ಫೂಟ್ ವೇರ್ ಮಾಲಕ ಎಸ್.ದಿನೇಶ್ ಭಟ್, ಯುವ ಉದ್ಯಮಿ ಲೋಕಯ್ಯ ಗೌಡ, ಮಹಾಲಕ್ಷ್ಮಿ ಸ್ಟೋರ್ ಮಾಲಕ ಭರತ್ ಕುಮಾರ್, ಶ್ರೀಕಾಂತ್ ಕಾಮತ್ ಇತರ ಗ್ರಾಹಕರು ಹಾಜರಿದ್ದು ಶುಭ ಹಾರೈಸಿದರು.

ಉಜಿರೆಯಲ್ಲಿ 45 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಬ್ಯಾಂಕ್ ಗ್ರಾಹಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸಿ ಇಂದು 45ರ ಸಂಭ್ರಮದಲ್ಲಿದೆ ಎಂದು ಶಾಖೆಯ ಬ್ಯಾಂಕ್ ಮ್ಯಾನೇಜರ್ ವಿನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here