ಶಿಬಾಜೆ: ಬೂತ್ ಹಾಗೂ ಗ್ರಾಮ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಶಿಬಾಜೆ ಗ್ರಾಮದ ಬೂತ್ ಹಾಗೂ ಗ್ರಾಮ ಸಮಿತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ್.ಟಿ.ಎಮ್ ಅವರ ಮನೆಯಲ್ಲಿ ನಡೆಯಿತು

ಈ ಸಭೆಗೆ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷ ಕೆಂ.ಎಂ.ನಾಗೇಶ್ ಕುಮಾರ್ ಗೌಡ, ತಾಲೂಕು ಕಾಂಗ್ರೆಸ್ ಮುಖಂಡರಾದ ಕಲಂದರ್ ಕೊಕ್ಕಡ ಹಾಗೂ ಗ್ರಾಮ ಸಮಿತಿಯ ಅಧ್ಯಕ್ಷ ಎ.ಶ್ರೀಧರ್ ರಾವ್ ಹಾಗೂ ಬೂತು ಸಮಿತಿಯ ಅಧ್ಯಕ್ಷರಾದ ವಸಂತ ತಂಬ್ಲಾಜೆ ಹಾಗೂ ಸಿಬಿ.ಪಿ.ವಿ ಹಾಗೂ ಶಿಬಾಜೆಯ ಗ್ರಾಮ ಸಮಿತಿಯ ಹಾಗೂ ಬೂತ್ ಸಮಿತಿಯ ಪದಾಧಿಕಾರಿಗಳು ಹಾಜರಿದ್ದು, ಮುಂಬರುವ ಚುನಾವಣೆಯ ಬಗ್ಗೆ ಪಕ್ಷವನ್ನು ತಳಮಟ್ಟದಿಂದಲೇ ಪಕ್ಷ ಸಂಘಟನೆಯ ಬಗ್ಗೆ ಸುಗೀರ್ಗವಾಗಿ ಚರ್ಚಿಸಲಾಯಿತು.ಹಾಗೂ ಪದಾಧಿಕಾರಿಗಳ ಅಹವಾಲುಗಳನ್ನು ಅಧ್ಯಕ್ಷರಲ್ಲಿ ಹೇಳಿಕೊಂಡರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಾಗೂ ಪದಾಧಿಕಾರಿಗಳ ಭಾವನೆಗಳಿಗೆ ದಕ್ಕೆ ಹಾಗದಂತೆ ನೋಡಿಕೊಳ್ಳುದಾಗಿ ಅಧ್ಯಕ್ಷರು ತಮ್ಮ ಮನದಾಳದ ಮಾತುಗಳಲ್ಲಿ ಹೇಳಿದರು.

ಕಾರ್ಯಕ್ರಮಕ್ಕೆ ಎ.ಶ್ರೀಧರ್ ರಾವ್ ರವರು ಬಂದತಹ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಸ್ವಾಗತಿಸಿದರು.ಸಿಬಿ.ಪಿ.ವಿ ರವರು ಧನ್ಯವಾದ ಸಮರ್ಪಿಸಿದರು.

ಕಾರ್ಯಕರ್ಮವನ್ನು ವಸಂತ ತಂಬ್ಲಾಜೆ ನಿರೂಪಿಸಿದರು.ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಜಯರಾಜ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here