ಕೊಯ್ಯೂರು ನಲ್ಲಿ ಬೃಹತ್ ಮಿಲಾದ್ ಸಂದೇಶ ಜಾಥಾ

0

ಕೊಯ್ಯೂರು: ಸೆ.28 ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ 1498ನೇ ಜನ್ಮದಿನದ ಅಂಗವಾಗಿ ಸಿರಾಜುಲ್ ಹುದಾ ಜುಮಾ ಮಸೀದಿ ಉಣ್ಣಾಲು ಇಲ್ಲಿನ ಜಮಾಅತಿಗರಿಂದ ಬೃಹತ್ ಮೀಲಾದ್ ಸಂದೇಶ ಜಾಥಾ ಇಂದು ನಡೆಯಿತು.

ಉಣ್ಣಾಲು ಜುಮಾ ಮಸೀದಿ ವಠಾರದಿಂದ ಆರಂಭಗೊಂಡ ವಾಹನ ಜಾಥಾ ಆದೂರು ಪೆರಾಲ್ ಜಂಕ್ಷನ್ ಮೂಲಕ ಸಾಗಿ ಪರಪ್ಪು ದರ್ಗಾ ವಠಾರದಲ್ಲಿ ಸಮಾಪ್ತಿಗೊಂಡಿತು.

ಜಮಾಅತ್ ಅಧ್ಯಕ್ಷ ಅಬ್ದುಲ್ ಲತೀಫ್ ಜಾಥಕ್ಕೆ ನೇತೃತ್ವವಹಿಸಿದ್ದರು ಜಮಾಅತ್ ಖತೀಬರಾದ ಜುನೈದ್ ರಝಾ ಅಝ್ಹರಿ ಯವರಿಂದ ಆದೂರು ಪೆರಾಲ್ ಜಂಕ್ಷನ್‌ನಲ್ಲಿ ಸಂದೇಶ ಭಾಷಣ ನಡೆಯಿತು. ಅಧ್ಯಾಪಕರಾದ ಅಬ್ದುಲ್ ಅಝೀಝ್ ಮದನಿ, ಜಮಾಅತ್ ಕಮಿಟಿ ಪದಾಧಿಕಾರಿಗಳು, ಎಸ್.ವೈ.ಎಸ್,ಎಸ್.ಎಸ್.ಎಫ್ ನಾಯಕರು ಸರ್ವ ಜಮಾಅತಿಗರು ಭಾಗಿಯಾಗಿದ್ದರು.

ಜಾಥಾ ಮಧ್ಯೆ ಅಲ್ಲಲ್ಲಿ ಸಿಹಿತಿಂಡಿ, ತಂಪು ಪಾನೀಯ, ಅನ್ನದಾನ ವಿತರಿಸುತ್ತಿದ್ದರು.

LEAVE A REPLY

Please enter your comment!
Please enter your name here