ನೀರಪಾದೆ ಕಳೆಂಜದಲ್ಲಿ ಸತ್ಯನಾರಾಯಣ ಪೂಜೆ ಮತ್ತು ಮೊಸರು ಕುಡಿಕೆ ಉತ್ಸವ

0

ನಿಡ್ಲೆ: ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಮೊಸರು ಕುಡಿಕೆ ಉತ್ಸವವು ಸೆ.17ರಂದು ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನೀರಪಾದೆ ಹಾಗೂ ಪ್ರಗತಿ ಬಂದು ಒಕ್ಕೂಟ ಬರೆಂಗಾಯ ಇದರ ಸಂಯುಕ್ತ ಆಶ್ರಯದಲ್ಲಿ ನಡೆಯಿತು.ಪುರಂದರ ಗೌಡ ನೆರವೇರಿಸಿದರು.

ಪುರುಷರಿಗೆ ಮಹಿಳೆಯರಿಗೆ ಮಕ್ಕಳಿಗೆ ಮತ್ತು ಚಿಕ್ಕ ಮಕ್ಕಳಿಗೆ ಮುದ್ದು ಕೃಷ್ಣ ವೇಷ ಆಯೋಜಕರು ಏರ್ಪಡಿಸಿದ್ದರು. ಇದರ ಸಮರೋಪ ಸಮಾರಂಭ ಸಾಯಂಕಾಲ 5ಗಂಟೆಗೆ ನೆರವೇರಿತು.
ಸಭಾಧ್ಯಕ್ಷತೆಯನ್ನು ನೀರಪಾದೆ ಕೃ.ಜ.ಸ.ಅಧ್ಯಕ್ಷ ಶಿವರಾಜ ರೈ ವಹಿಸಿದ್ದರು.ಧಾರ್ಮಿಕ ಭಾಷಣವನ್ನು ಕಾಯರ್ತಡ್ಕ ಸ.ಪ್ರೌ.ಶಾಲಾ ಮುಖ್ಯೋಪಾಧ್ಯಾಯರಾದ ವಿನಾಯಕ ಜೋಷಿ ರವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೊನ್ನಮ್ಮ, ಕಳೆಂಜ ಗ್ರಾ.ಪಂ.ಅಧ್ಯಕ್ಷೆ ಗಿರಿಜಾ, ನಿಡ್ಲೆ ಗ್ರಾ.ಪಂ.ಉಪಾಧ್ಯಕ್ಷ ರುಕ್ಕಯ್ಯ, ಶ್ರೀ ಕ್ಷೇಧ.ಗ್ರಾ.ಯೋ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಸುರೇಂದ್ರ, ನೀರಪಾದೆ ಶ್ರೀ.ಸ.ಭ.ಮಂ ಸ್ಥಾಪಕ ಅಧ್ಯಕ್ಷ ಸುಂದರ ಎಂ.ಕೆ.ಏಕ, ಗೌರವ ಅಧ್ಯಕ್ಷ ಶ್ರೀ.ಸ.ಭ.ಮಂ ನೀರಪಾದೆ ಮಾಲಿಂಗ ಗೌಡ, ಕಳೆಂಜ ಗ್ರಾ.ಪಂ. ಸದಸ್ಯೆ ಮಮತಾ ಮುಂತಾದವರು ಉಪಸ್ಥಿತರಿದ್ದರು.
ಸ್ವಾಗತ ಮತ್ತು ಧನ್ಯವಾದವನ್ನು ಕೇಶವ ಗೌಡ ಕಳೆಂಜ ಮತ್ತು ನಿರೂಪನೆಯನ್ನು ವೀಣಾ ರವರು ನೆರವೇರಿಸಿದರು.

LEAVE A REPLY

Please enter your comment!
Please enter your name here