ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

0

ಪಟ್ರಮೆ: ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಸೆ.16 ರಂದು ಅನಾರು ದುರ್ಗಾಪರಮೇಶ್ವರಿ ದೇವಳದ ಅರ್ಚಕರಾದ ಗುರುಪ್ರಸಾದ್ ನಿಡ್ಡಣ್ಣಾಯರ ಪೌರೋಹಿತ್ಯದಲ್ಲಿ ಜರುಗಿತು.

ನೂತನ ಕಟ್ಟಡ ಸಮಿತಿ ಅಧ್ಯಕ್ಷರಾದ ಯೋಗೀಶ್ ಗೌಡ ಜಾಲು ಕೆಸರು ಕಲ್ಲು ಹಾಕುವ ಮೂಲಕ ನೆರವೇರಿಸಿದರು.ಸಂಘದ ಅಧ್ಯಕ್ಷರಾದ ದೇವಪಾಲ ಅಜ್ಜಿ ಉಳಿಯಬೀಡು ಹಾಲೆರೆದು ಪೂಜೆ ಸಲ್ಲಿಸಿದರು.

ಪಟ್ರಮೆ ಪಂಚಾಯತ್ ಅಧ್ಯಕ್ಷರಾದ ಮನೋಜ್‌ ಗೌಡ ಅಂಗರಗುಡ್ಡೆ, ಒಕ್ಕೂಟದ ವಿಸ್ತರಣಾಧಿಕಾರಿಗಳಾದ ರಾಜೇಶ್.ಪಿ.ಕಾಮತ್, ನೀಲಯ್ಯ ಗೌಡ, ರುಕ್ಮಯ್ಯ ಗೌಡ, ನಿರಂಜನ್ ಜೈನ್, ಪುರಂದರ.ಎಸ್. ಸೂರ್ಯತ್ತಾವು, ಕಟ್ಟಡಕ್ಕೆ ಸ್ಥಳ ನೀಡಿದ ಚಂದ್ರಶೇಖರ ಗೌಡ ಅನಾರು ಹಾಗೂ ಸಂಘದ ನಿರ್ದೇಶಕರು ಮತ್ತು ಊರ ಸದಸ್ಯರು ಉಪಸ್ಥಿತರಿದ್ದರು.

ಶಿಲಾನ್ಯಾಸ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗುರುಪ್ರಸಾದ್ ನಿಡ್ಡಣ್ಣಾಯರು ಮಾತನಾಡಿ ಗೋವಿನ ಮಹತ್ವ ಹಾಗೂ ದೇವರ ಅನುಗ್ರಹ ದೊರೆಯಲೆಂದು ಪ್ರಾರ್ಥಿಸಿದರು.ಪಂಚಾಯತ್‌ನ ನೂತನ ಅಧ್ಯಕ್ಷರಾದ ಮನೋಜ್ ಗೌಡ ಸಹಕಾರಿ ಸಂಘದ ಪರವಾಗಿ ಅಭಿನಂದಿಸಲಾಯಿತು.ಮನೋಜ್ ಗೌಡ ಮಾತನಾಡಿ ಹೈನುಗಾರಿಕೆಯ ಯುವಕರು ಪರಿಶ್ರಮ ಹಾಗೂ ಉತ್ಸಾಹ ಬಹಳ ಮುಖ್ಯವಾಗಿದೆ ಎಂದರು.

ಸಂಘದ ನಿರ್ದೇಶಕರಾದ ರುಕ್ಮಯ್ಯ ಗೌಡ ಪದಳ ಬಂದ ಅತಿಥಿಗಳನ್ನು ಸ್ವಾಗತಿಸಿ, ಸಿಬ್ಬಂದಿ ದೀಕ್ಷಿತಾ.ಎ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here