ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಹಾಸಭೆ-ವಾರ್ಷಿಕ 150 ಕೋಟಿ ವ್ಯವಹಾರ

0

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲು ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ನವೀನ್ ಕೆ.ಸಾಮಾನಿಯವರ ಅಧ್ಯಕ್ಷತೆಯಲ್ಲಿ ನವೋದಯ ಸಭಾಭವನದಲ್ಲಿ ಸೆ. 16 ರಂದು ಪಡೆಯಿತು.

ಸಂಘವು ವರದಿ‌ ಸಾಲಿನಲ್ಲಿ 150 ಕೋಟಿ ವ್ಯವಹಾರ ನಡೆಸಿದೆ. ಜೊತೆಗೆ ಸಂಘವು ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದು ಈ ವರ್ಷ ಮೃತಪಟ್ಟ ರೈತ ಸದಸ್ಯರ ಕುಟುಂಬಕ್ಕೆ ರೂ 37 ಸಾವಿರ ಸಹಾಯಧನ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ನವೀನ್ ಕೆ ಸಾಮಾನಿ ಹೇಳಿದರು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ತಾರಾನಾಥ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮ್ಮಾಜಿ ಕೋಟ್ಯಾನ್, ಕೆ.ನಾರಾಯಣ ರಾವ್, ಆನಂದ ಸಾಲಿಯಾನ್, ಸುಮಿತ್ರಾ ಬಿ ಹೆಗ್ಡೆ, ಮಲ್ಲಿಕಾ, ಶಿವಪ್ಪ ಪೂಜಾರಿ, ರಾಮ ಬಂಗೇರಾ, ಅಶೋಧರ ಎನ್, ಶೀನಪ್ಪ ಎಂ, ಸುಶೀಲಾ, ಸುಧೀರ್, ಪಿ ಯಚ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಠೇವಣಿದಾರರಾದ ನೇಮಣ್ಣ, ಹಿರಿಯ ಸದಸ್ಯರಾದ ಕೃಷ್ಣಪ್ಪ ಮೂಲ್ಯ, ಪೂವಪ್ಪ ನಾಯ್ಕ, ಪಿ.ಎಂ ಸನ್ನಿ, ಕೇಶವ ಮಡಿವಾಳ, ತಿಮ್ಮಯ್ಯ ಆಚಾರ್ಯ, ಅಣ್ಣು ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here