ಶಿಬಾಜೆ ಅಂಗನವಾಡಿ ಕೇಂದ್ರದಲ್ಲಿ ಸೆ.15ರಂದು ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಸ್ತ್ರೀ ಶಕ್ತಿ ಸದಸ್ಯರು ವಿವಿಧ ಪೌಷ್ಟಿಕ ಖಾದ್ಯಗಳನ್ನು ತಯಾರಿಸಿ ತಂದರು.
ಇಲಾಖೆಯ ಮೇಲ್ವಿಚಾರಕಿ ವಿನೋದರವರು ಪ್ರಾಸ್ತಾವಿಕವಾಗಿ ಮಾತನಾಡಿ ಪೋಷಣ್ ಅಭಿಯಾನದ ಮಹತ್ವದ ಬಗ್ಗೆ ತಿಳಿಸಿದರು.
ಆರೋಗ್ಯ ಸುರಕ್ಷಾ ಅಧಿಕಾರಿ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷ ದಿನಕರ ಕುರೂಪ್, ನಿಕಟ ಪೂರ್ವ ಅಧ್ಯಕ್ಷ ರತೀಶ್, ಸಿ.ಹೆಚ್.ಒ ಸುಶ್ಮಿತ, ಸಂಜೀವಿನಿ ಒಕ್ಕೂಟದ ಲತಾ, ಬಾಲವಿಕಾಸ ಸದಸ್ಯೆ ಸುಕನ್ಯ, ಸ್ತ್ರೀ ಶಕ್ತಿ ಗೊಂಚಲಿನ ಸದಸ್ಯೆ ಪೂರ್ಣಿಮ, ಆಶಾಕಾರ್ಯಕರ್ತೆ ದೀಪಾ ಪ್ರಸಾದ್ ಹಾಜರಿದ್ದರು.ಅಂಗನವಾಡಿ ಕಾರ್ಯಕರ್ತೆ ಅಜಿತಾ ಸ್ವಾಗತಿಸಿ ನಿರೂಪಿಸಿ, ಧನ್ಯವಾದ ನೀಡಿದರು.