ವೇಣೂರು ಕ್ರಿಸ್ತರಾಜ ವಿಶೇಷ ಚೇತನ ಶಾಲೆಯಲ್ಲಿ ವಿಕಲ ಚೇತನರ ಮನೆ ಬಾಗಿಲಿಗೆ ಯುಡಿಐಡಿ

0

ವೇಣೂರು: ಇಲ್ಲಿಯ ಕ್ರಿಸ್ತರಾಜ ವಿಶೇಷಚೇತನ ಮಕ್ಕಳ ಶಾಲೆಯಲ್ಲಿ ಆ.31 ರಂದು ವಿಕಲಚೇತನರ ಮನೆಬಾಗಿಲಿಗೆ ಯುಡಿಐಡಿ ಕಾರ್ಯಕ್ರಮ ಜರುಗಿತು.

ಇಂದಬೆಟ್ಟು ಗ್ರಾಮ ಪಂಚಾಯತಿನ ವಿಆರ್ ಡಬ್ಲ್ಯೂ ಎಮ್.ಜೆ. ಜೋಸೆಪ್ ಬೆಳಾಲು ಗ್ರಾಮದ ವಿಆರ್ ಡಬ್ಲ್ಯೂ ಈರಣ್ಣ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ದೊರೆಯುವ ಸರ್ಕಾರದ ಸೌಲಭ್ಯ, ಶೇಕಡಾ 5% ಅನುದಾನ, ಹಾಗೂ ಅನೇಕ ಯೋಜನೆಯ, ಹಾಗೂ ಕಾನೂನು ಮಾಹಿತಿಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು.ಹಾಗೂ ಯುಡಿಐಡಿ, ಎಂಡೋಸಲ್ಫಾನ್ ಬಗ್ಗೆ ಮಾಹಿತಿಯನ್ನು ನೀಡಿದರು.

ಕ್ರಿಸ್ತರಾಜ್ ವಿಶೇಷ ಮಕ್ಕಳ ಶಾಲೆಯ ಮುಕ್ಯೋಪಾಧ್ಯಾಯರು, ಶಾಲಾ ಮಕ್ಕಳ ಪಾಲಕರು, ಪೋಷಕರು ಹಾಗೂ ಸಿಬ್ಬಂದಿಗಳು ಬಾಗಿಯಾಗಿದ್ದರು.ಮತ್ತು ವಿವಿಧ ಗ್ರಾಮ ಪಂಚಾಯತ್ ನ ವಿಆರ್ ಡಬ್ಲ್ಯೂಗಳಾದ ಕು.ದಿವ್ಯಾ ಮರೋಡಿ, ರಂಜನ್ ವೇಣೂರು, ಸುಶಾಂತ್ ಕಾಶಿಪಟ್ನ, ಗಣೇಶ್ ಮೇಲಂತಬೆಟ್ಟು, ಸುಜಾತ ಅಂಡಿಂಜೆ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here