ಕೋಟಿ ಚೆನ್ನಯ್ಯ ಸೈಬರ್ ಹಾಗೂ ಎಸ್.ಬಿ.ಐ ಸರ್ವೀಸ್ ಸೆಂಟರ್ ಮತ್ತು ವಾಹನ & ಎಲ್.ಐ.ಸಿ ಇನ್ಸೂರೆನ್ಸ್ ಮಾಹಿತಿ ಕೇಂದ್ರ ಶುಭಾರಂಭ

0

ಸವಣಾಲು: ಕೋಟಿ ಚೆನ್ನಯ್ಯ ಸೈಬರ್ ಹಾಗೂ ಎಸ್.ಬಿ.ಐ ಸರ್ವೀಸ್ ಸೆಂಟರ್ ಮತ್ತು ವಾಹನ & ಎಲ್.ಐಸಿ ಇನ್ಸೂರೆನ್ಸ್ ಮಾಹಿತಿ ಕೇಂದ್ರವು ಮಂಜದಬೆಟ್ಟು ಕ್ರಾಸ್ ಮುಖ್ಯರಸ್ತೆ ಸವಣಾಲುನಲ್ಲಿ ಆ.28ರಂದು ಶುಭಾರಂಭಗೊಂಡಿತು.

ಸಂಸ್ಥೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಭಾರತೀಯ ಜೀವ ವಿಮಾ ವಿಭಾಗದ ಬೆಳ್ತಂಗಡಿ ಶಾಖೆಯ ಶಾಖಾಧಿಕಾರಿ ವಿ ಎಎಸ್ ಕುಮಾರ್ಚಾಲನೆ ನೀಡಿ ಬಳಿಕ ಮಾತನಾಡಿ ಅವರು ಸಂಸ್ಥೆಯು ಜನರಿಗೆ ಉತ್ತಮ ಸೇವೆಯನ್ನು ನೀಡಿ ಜನರಿಗೆ ಕ್ಲಪ್ತ ಸಮಯದಲ್ಲಿ ಸೇವೆಗಳು ಸಿಗುವಂತಾಗಲಿ ಗ್ರಾಹಕರಿಗೆ ಈ ಸಂಸ್ಥೆಯಲ್ಲಿ ವಿಮಾ ಪಾಲಿಸಿ, ಎಲ್ಲಾ ವಿಧಗಳ ಅರ್ಜಿ ಫಾರಂಗಳು ಸಿಗುವುದರಿಂದ ಜನತೆಗೆ ಸಹಕಾರಿಯಾಗಲಿದೆ ಎಂದು ಶುಭ ಹಾರೈಸಿದರು.

ಸಂಸ್ಥೆಯ ಮಾಲಕ ಯೋಗೀಶ್ ಎಂ ಅವರು ಈ ಸಂಸ್ಥೆಯಲ್ಲಿ ಪಾಲಿಸಿಗಳ ಮಾಹಿತಿಯನ್ನು ನೀಡಲಾಗುವುದು ಅಷ್ಟೇ ಅಲ್ಲದೆ ಎಲ್ಲಾ ರೀತಿಯ ಅರ್ಜಿ ಫಾರಂಗಳು ಹಾಗೂ ಎಸ್.ಬಿಐ ಎಲ್ಲಾ ಸೇವೆಗಳು ಈ ಸೇವಾ ಕೇಂದ್ರದಲ್ಲಿ ಲಭ್ಯವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ಬೆಳ್ತಂಗಡಿ ವಿಭಾಗದ ಅಭಿವೃದ್ಧಿ ಅಧಿಕಾರಿ ಎಂ ವಿಶ್ವೇಶ್ವರ ಶೆಟ್ಟಿ ಹಾಗೂ ಸಂಸ್ಥೆಯ ಮಾಲಕಿ ದಿವ್ಯ ಲಕ್ಷ್ಮೀ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here