ಆಂಬ್ಯುಲೆನ್ಸ್ ನಲ್ಲಿದ್ದ ಮರಿಯಮ್ಮ ಆಸ್ಪತ್ರೆಯಲ್ಲಿ ಮೃತ್ಯು

0

ಬೆಳ್ತಂಗಡಿ: ಆಂಬ್ಯುಲೆನ್ಸ್ ನಲ್ಲಿದ್ದ ಅಳದಂಗಡಿ ಬಡಗಕಾರಂದೂರು ಬಳಿಯ ಸುಂಕದಕಟ್ಟೆಯ ದಿ. ಹಸನಬ್ಬರವರ ಪತ್ನಿ ಮರಿಯಮ್ಮ (74ವ)ರವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಆ.18ರಂದು ಮರಿಯಮ್ಮರವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಅವರನ್ನು ಕರೆ ತರಲಾಗಿತ್ತು.ಅಲ್ಲಿ ಇ.ಸಿ.ಜಿ. ಮಾಡಿಸಿ ತುರ್ತು ಚಿಕಿತ್ಸೆ ನೀಡಲಾಗಿತ್ತು.ಅವರ ಹೃದಯನಾಳಗಳಲ್ಲಿ ಬ್ಲಾಕ್ ಇರುವುದರಿಂದ ವೈದ್ಯರು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು.ಈ ನಿಟ್ಟಿನಲ್ಲಿ ಶಬೀರ್ ಅವರ ಆಂಬುಲೆನ್‌ಸ್‌‌ನಲ್ಲಿ ಮರಿಯಮ್ಮ ಅವರನ್ನು ಮಂಗಳೂರು ಆಸ್ಪತ್ರೆೆಗೆ ಕರೆದೊಯ್ಯುತ್ತಿದ್ದ ವೇಳೆ ವಗ್ಗ ಬಳಿ ಅಪಘಾತ ನಡೆದಿತ್ತು.

ಈ ವೇಳೆ ಚಾಲಕ ಶಬೀರ್ ತೀವ್ರ ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಮರಿಯಮ್ಮರವರ ತಲೆಗೆ ಪೆಟ್ಟು ಬಿದ್ದು ಕಿವಿಯಲ್ಲಿ ರಕ್ತಸ್ರಾಾವವಾಗಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆಂಬ್ಯುಲೆನ್ಸ್ ನಲ್ಲಿ ಅವರ ಜತೆ ಇದ್ದ ಅವರ ಪುತ್ರ ರಝಾಕ್ ಮತ್ತು ಸೊಸೆ ಜಮೀಳಾರವರಿಗೆ ಗಾಯಗಳಾಗಿತ್ತು.ರಝಾಕ್ ಅವರ ಭುಜ ಮತ್ತು ಕೈ ಮೂಳೆ ಮುರಿತಕ್ಕೊೊಳಗಾಗಿದ್ದು ಜಮೀಳಾರವರ ಕಾಲಿಗೆ ಹಾಗೂ ಬೆನ್ನು ಮೂಳೆಗೆ ತೀವ್ರವಾದ ಪೆಟ್ಟು ಬಿದ್ದಿದೆ.ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಾರೆ. ಮೃತ ಮರಿಯಮ್ಮರವರು ಪುತ್ರ ರಝಾಕ್, ಪುತ್ರಿಿಯರಾದ ನೆಬೀಸಾ, ಆಯಿಷಾ, ಸೊಸೆ ಜಮೀಳಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here