ಉಜಿರೆ: ಶ್ರೀ ಧ. ಮಂ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

0

ಉಜಿರೆ: 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೇಶದಲ್ಲೇ ಉತ್ಕೃಷ್ಟವಾದ ಸಂಸ್ಥೆಯಾದಂಥ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಹಿರಿಯ ಸಾಧಕರು ಮತ್ತು ಮಾಜಿ ವಿಧಾನಪರಿಷದ್ ಸದಸ್ಯರಾದಂಥ ಎಸ್.ವಿ .ಮಂಜುನಾಥ್, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಗಣ್ಯ ವ್ಯಕ್ತಿಗಳಾದ ರಾಜು ಗೌಡ ಮಾನ್ಯ ಶಾಸಕರು ಶೃಂಗೇರಿ ಕ್ಷೇತ್ರ, ಕಾರ್ಪೊರೇಟೀವ್ ಬ್ಯಾಂಕ್ ರೆಜಿಸ್ಟ್ರಾರ್ ಆದಂತಹ ಕ್ಯಾಪ್ಟನ್ ರಾಜೇಂದ್ರ ಐ ಎ ಎಸ್ ಮತ್ತು ತಮಿಳ್ ನಾಡಿನ ಮಾಜಿ ಶಾಸಕರದಂಥ ಎಸ್ ಪುಷ್ಪರಾಜ್, ಎಸ್ ವಿ ಮಂಜುನಾಥ್ ಅವರೊಂದಿಗೆ ದ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.

ಈ ಕಾರ್ಯಕ್ರಮಕ್ಕೆ ಯಶಸ್ವಿ ಕಾರ್ಯಕರ್ತ ಮಾನ್ಯ ಮುಖ್ಯ ವೈದ್ಯಾಧಿಕಾರಿ ಡಾ|ಶಿವಪ್ರಸಾದ್ ಶೆಟ್ಟಿ, ಹಿರಿಯ ವೈದ್ಯಾಧಿಕಾರಿ ಡಾ| ಬಿಂಧು, ಸ್ಥಾನಿಕ ವೈದ್ಯಾಧಿಕಾರಿ ಡಾ|ಶಶಿಕಿರಣ್, ಯೋಗ ಟ್ರಸ್ಟ್ ನಿರ್ದೇಶಕ ಡಾ. ಶಶಿಕಾಂತ್ ಜೈನ್, ಆಡಳಿತ ಅಧಿಕಾರಿ ಜಗನ್ನಾಥ್, ವ್ಯಸ್ಥಾಪಕರದಂಥ ಸ್ವಸ್ತಿಕ್ ಶಾಂತಿವನ ಸಿಬ್ಬಂದಿವರ್ಗ ಮತ್ತು ಸಾಧಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here