ಬ್ರೈನ್ ಟ್ಯೂಮರ್ ನಿಂದ ಬಳಲಿ ಮೃತ್ಯು

0

ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಕಿಲ್ಲೂರು ಸಮೀಪದ ಗುತ್ತಿಗೆ ಬೆಟ್ಟು ನಿವಾಸಿ ಶಾರದಾ(40) ಎಂಬವರು ಬ್ರೈನ್ ಟ್ಯೂಮರ್ ನಿಂದ ಬಳಲಿ ಮೃತ ಪಟ್ಟ ಘಟನೆ ಆ.14ರಂದು ವರದಿಯಾಗಿದೆ.ಬ್ರೈನ್ ಟ್ಯೂಮರ್ ನ ಶಸ್ತ್ರಚಿಕಿತ್ಸೆ ನಡೆದ ಬಳಿಕ ತನ್ನ ಸಹೋದರನ ಮನೆಯಾದ ಬಿಸಿರೋಡ್ ನಲ್ಲಿ ವಾಸ್ತವ್ಯವಿದ್ದ ಅವರು ಅಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಇವರ ಪತಿ ಗೋಪಾಲ ಮೂಲ್ಯ ಕೂಡ ಮೂರು ವರ್ಷಗಳ ಹಿಂದೆ ಕಾಯಿಲೆಯಿಂದ ಮೃತ ಪಟ್ಟಿದ್ದು, ಆಶಾ ಕಾರ್ಯಕರ್ತೆಯಾಗಿ, ಬಂಗಾಡಿ ಸಹಕಾರಿ ಸಂಘದಲ್ಲಿ ಪಿಗ್ಮಿ ಸಂಗ್ರಾಹಕರಾಗಿಯು ಕಾರ್ಯ ನಿರ್ವಹಿಸಿದ್ದರು.

ಇವರಿಗೆ ವಿದ್ಯಾಭ್ಯಾಸ ಮಾಡುತ್ತಿರುವ ಪುತ್ರ ಹಾಗೂ ಪುತ್ರಿ ಇದ್ದಾರೆ.ತೀರಾ ಕಷ್ಟದಲ್ಲಿ ಜೀವನ ಸಾಗಿಸಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದ್ದರು.ಈಗ ತಾಯಿಯ ಸಾವಿನಿಂದ ಮಕ್ಕಳ ಭವಿಷ್ಯ ಡೋಲಾಯಮಾನವಾಗಿದೆ.

LEAVE A REPLY

Please enter your comment!
Please enter your name here