ಉಳ್ತೂರಿನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

0

ವೇಣೂರು: ಇಲ್ಲಿನ ಉಳ್ತೂರಿನ ಮುಹಿಯುದ್ದೀನ್ ಜುಮಾ ಮಸೀದಿ ಪರಿಸರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಮಸೀದಿ ಅಧ್ಯಕ್ಷರಾದ ಬಿ.ಎಸ್ ಮುಹಮ್ಮದ್ ಹಾಜಿ ದ್ವಜಾರೋಹಣ ಮಾಡಿದರು.ಚಂದ್ರಶೇಖರ್ ಭಟ್, ರವಿ ಉಳ್ತೂರು, ಹಾಫಿಳ್ ಮಿಖ್ದಾದ್ ಮಿಸ್ಬಾಹಿ ಸಂದೇಶ ಭಾಷಣವನ್ನು ಮಾಡಿದರು.ಅಬ್ಬಾಸ್ ಹಾಜಿ ಉಳ್ತೂರು ಸ್ವಾಗತಿಸಿ, ಉಳ್ತೂರು ಮುದರಿಸ್ ಮುಹಮ್ಮದ್ ಫಾಳಿಲಿ ಅಲ್ ಕಾಮಿಲಿ ವಂದಿಸಿದರು.

ಕಾರ್ಯಕ್ರಮದಲ್ಲಿ ಊರಿನ ಹಿರಿಯರು ಕಿರಿಯರು ಸರ್ವ ಧರ್ಮೀಯರು ದರ್ಸ್ ಮತ್ತು ಮದ್ರಸ ವಿದ್ಯಾರ್ಥಿಗಳು ಸೇರಿದಂತೆ ಹಲವರು ಬಾಗವಹಿಸಿದರು.

ಕೊನೆಯಲ್ಲಿ ರಾಷ್ಟ್ರಗೀತೆ ಹಾಡಿ ಸಿಹಿ ವಿತರಿಸಲಾಯಿತು

LEAVE A REPLY

Please enter your comment!
Please enter your name here