ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್‌ನ ಮಾಸಿಕ ಸಭೆ

0

ಬೆಳ್ತಂಗಡಿ: ಬೆಳ್ತಂಗಡಿಯ ಲೋಬೋ ಟವರ್ಸ್ ನಲ್ಲಿ ಬೆಳ್ತಂಗಡಿ ಛೇಂಬರ್ ಆಫ್ ಕಾಮರ್ಸ್ ಇದರ ಮಾಸಿಕ ಸಭೆಯು ಜು.26ರಂದು ನಡೆಯಿತು.ಸಭೆಯಲ್ಲಿ ಅನಿಯಮಿತವಾಗಿ ವಿದ್ಯುತ್ ಅಡಚಣೆಯಾಗುತ್ತಿರುವ ಬಗ್ಗೆ ಸಂಬಂಧಿಸಿದವರಿಗೆ ಮನವಿ, ರಸ್ತೆ ಬದಿ ವ್ಯಾಪಾರದಿಂದ ಅಧಿಕೃತ ವ್ಯಾಪಾರಸ್ಥರಿಗೆ ಆಗುತ್ತಿರುವ ತೊಂದರೆ, ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ಮುಖ್ಯರಸ್ತೆಯ ಬಗ್ಗೆ ಹೊರಡಿಸಲಾದ ನೋಟಿಫಿಕೇಶನ್ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಪ್ರಮೋದ್ ಆರ್ ನಾಯಕ್, ಪಟ್ಟಣ ಪಂಚಾಯತ್ ಮಾಜಿ ಉಪಾಧ್ಯಕ್ಷ ಜಯಾನಂದ ಗೌಡ, ಚಿದಾನಂದ ಜೈನ್ ಇಡ್ಯ, ಹೇಮಂತ್ ಎರಡೂರೂ ಜಯರಾಮ್ ಗೌಡ, ಸುಶೀಲಾ ಹೆಗ್ಡೆ, ಶಶಿಧರ್ ಪೈ, ರಾಜೇಶ್ ಪೈ, ಸೋಜಾ ಎಲೆಕ್ಟ್ರಾನಿಕ್ಸ್ ಮಾಲಕ ಅಲ್ಫೊನ್ಸ್ ಫ್ರಾಂಕೋ, ಮಂಜು ಇಂಡಿಯಾನ್ ಗ್ಯಾಸ್ ಏಜೆನ್ಸಿಯ ಶಿವಕುಮಾರ್ ಮತ್ತು ಜೊತೆ ಕಾರ್ಯದರ್ಶಿ ಯಶವಂತ್ ಪಟರ್ವಧನ್ ಮತ್ತಿತರರು ಹಾಜರಿದ್ದರು. ಸಭೆಯ ಅಧ್ಯಕ್ಷತೆಯನ್ನು ಪುಷ್ಪರಾಜ ಶೆಟ್ಟಿ ವಹಿಸಿದ್ದರು.ಅವರು ಸ್ವಾಗತಿಸಿ ಕಾರ್ಯದರ್ಶಿ ರೋನಾಲ್ಡ್ ಲೋಬೋ ವಂದಿಸಿದರು.

LEAVE A REPLY

Please enter your comment!
Please enter your name here