ಬೆಳ್ತಂಗಡಿ: ಸರಕಾರಿ ಬಸ್ ನಲ್ಲಿ ಯುವತಿಗೆ ಕಿರುಕುಳ, ಮಿತ್ತಬಾಗಿಲಿನ ಕಬೀರ್ ಬಂಧನ

0

ಬೆಳ್ತಂಗಡಿ : ಸರಕಾರಿ ಬಸ್ ನಲ್ಲಿ ಸಂಚರಿಸುತ್ತಿದ್ದಾಗ ಯುವತಿಗೆ ಕಿರುಕುಳ ನೀಡಿದ್ದ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ ಘಟನೆ ಉಜಿರೆಯಲ್ಲಿ ನಡೆದಿದೆ.

ಮಂಗಳೂರಿನಿಂದ ಚಿಕ್ಕಮಗಳೂರಿಗೆ ಸಂಚರಿಸುತ್ತಿದ್ದ ಸರಕಾರಿ ಬಸ್ ನಲ್ಲಿ ಜುಲೈ 29 ರಂದು ಮಧ್ಯಾಹ್ನ 2:15 ರ ಸುಮಾರಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ನಿವಾಸಿ 19 ವರ್ಷದ ಯುವತಿ ತನ್ನ ಬ್ಯಾಗ್ ಹಿಡಿದುಕೊಂಡು ನಿದ್ರೆ ಮಾಡಿಕೊಂಡು ಸಂಚರಿಸುತ್ತಿದ್ದಾಗ, ಬಸ್ ಮಡಂತ್ಯಾರ್ ತಲುಪಿದಾಗ | ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮ ಪಂಚಾಯತ್ SDPI ಬೆಂಬಲಿತ ಸದಸ್ಯ ಕಬೀರ್(35) ಎಂಬಾತ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಇದ್ದ ಸೀಟಿಗೆ ಬಂದು ಕಿರುಕುಳ ನೀಡಿದ್ದು ಇದನ್ನು ವಿರೋಧಿಸಿದರೂ ಮತ್ತೆ ಮತ್ತೆ ತನ್ನ ಕಾಮುಕ ಕೃತ್ಯ ಮುಂದುವರಿಸಿದ್ದು ಈ ವೇಳೆ ನೊಂದ ಯುವತಿ ತನ್ನ ತಂದೆಗೆ ಹಾಗೂ ಉಜಿರೆಯ ಗೆಳೆಯನಿಗೆ ಮಾಹಿತಿ ನೀಡಿದ್ದು ಬಸ್ ಉಜಿರೆ ತಲುಪುತ್ತಿದ್ದಂತೆ ಕಾಮುಕ ಆರೋಪಿ ಕಬೀರ್ ನನ್ನು ಹಿಡಿದು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನೊಂದ ಯುವತಿ ನೀಡಿದ ದೂರಿನ ಮೇರೆಗೆ ಕಾಮುಕ ಕಬೀರ್ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here