ಉಜಿರೆ: ಬೆನಕ ಆಸ್ಪತ್ರೆಗೆ ಸ್ಪೀಕರ್ ಯು.ಟಿ ಖಾದರ್ ಭೇಟಿ- ಆಸ್ಪತ್ರೆಯವರಿಂದ ಸನ್ಮಾನ

0

ಉಜಿರೆ:ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ ಖಾದರ್ ಉಜಿರೆ ಬೆನಕ‌ ಆಸ್ಪತ್ರೆಗೆ ಭೇಟಿ ನೀಡಿದರು.ಧರ್ಮಸ್ಥಳದಿಂದ ವಾಪಾಸ್ ಮಂಗಳೂರು ಕಡೆಗೆ ತೆರಳುವ ವೇಳೆ ಬೆನಕ ಆಸ್ಪತ್ರೆಗೆ ಭೇಟಿ ನೀಡಿದ ಸ್ಪೀಕರ್, ಆಸ್ಪತ್ರೆಯ ಸ್ಥಿತಿಗತಿ, ಇರುವ ಸೌಲಭ್ಯಗಳ ಬಗ್ಗೆ ತಿಳಿದುಕೊಂಡರು.

ಈ ವೇಳೆ ಆಸ್ಪತ್ರೆಯ ಎಂ.ಡಿ. ಡಾ.ಗೋಪಾಲಕೃಷ್ಣ ಹಾಗೂ ಭಾರತಿ ಗೋಪಾಲಕೃಷ್ಣರವರು ಯು.ಟಿ ಖಾದರ್ ರವರನ್ನು ಸನ್ಮಾನಿಸಿ ಗೌರವಿಸಿದರು.ಈ ವೇಳೆ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್ ಜಿ ಭಟ್, ಕಾಂಗ್ರೆಸ್ ಮುಖಂಡರುಗಳಾದ ಧರಣೇಂದ್ರ ಕುಮಾರ್, ಹನೀಫ್, ಆಸ್ಪತ್ರೆಯ ಸಿಬ್ಬಂದಿವರ್ಗ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here