ಉಜಿರೆ ಜನಾರ್ಧನ ಶಾಲೆಯಲ್ಲಿ ಪರಿಸರ ಕಾರ್ಯಕ್ರಮ, ಹಣ್ಣಿನ ಗಿಡ ನಾಟಿ

0

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಇದರ ವತಿಯಿಂದ, ಶೌರ್ಯ ಘಟಕ, ಪ್ರಗತಿ ಬಂದು ಒಕ್ಕೂಟ ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ದ.ಕ.ಜಿ.ಪ.ಕಿ .ಪ್ರಾ ಜನಾರ್ಧನ ಶಾಲೆ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು.

ಶೌರ್ಯ ತಂಡದ ಸ್ವಯಂ ಸೇವಕರಾದ ಸಚಿನ್ ಬಿಡೆ, ರವೀಂದ್ರ, ಸಂತೋಷ್ ಉಜಿರೆ,ಸುಧೀರ್, ಶಿವ ಕುಮಾರ್,ರಾಘವೇಂದ್ರ ನಾಯ್ಕ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ, ಹಾಗೂ ಸಹ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷ ವಿಜಯ ಗೌಡ, ಸದಸ್ಯೆ ಶೀಲಾವತಿ, ಒಕ್ಕೂಟದ ಪದಾಧಿಕಾರಿಗಳು, ವಲಯ ಮೇಲ್ವಿಚಾರಕಿ ವನಿತಾ, ಸೇವಾ ಪ್ರತಿನಿಧಿ ಶೌರ್ಯ ತಂಡದ ಸಂಯೋಜಕಿ ಆಶಾ, ಉಜಿರೆಯ ಸೇವಾಪ್ರತಿನಿಧಿ ಗಳಾದ ಪ್ರೇಮಲತಾ, ಸೌಮ್ಯ, ಜಯಂತಿ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದು ಗಿಡನಾಟಿಯನ್ನು ಮಾಡಿದರು.

LEAVE A REPLY

Please enter your comment!
Please enter your name here