ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನಲ್ಲಿ ಶಾಸಕ ಹರೀಶ್ ಪೂಂಜಾರಿಗೆ ಸನ್ಮಾನ ಹಾಗೂ ವನಮಹೋತ್ಸವ ಕಾರ್ಯಕ್ರಮ

0

ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್ ಬೆಳ್ತಂಗಡಿಯಲ್ಲಿ ಜು.9ರಂದು ಬೆಳಿಗ್ಗಿನ ದಿವ್ಯ ಬಲಿಪೂಜೆಯ ನಂತರ ಬೆಳ್ತಂಗಡಿ ತಾಲೂಕಿನಲ್ಲಿ ದ್ವಿತೀಯ ಬಾರಿ ವಿಜೇತರಾದ ಶಾಸಕ ಹರೀಶ್ ಪೂಂಜಾರಿಗೆ ಸನ್ಮಾನ ಹಾಗೂ ವನಮಹೋತ್ಸವ ಆಚರಿಸಲಾಯಿತು.

ವೇದಿಕೆಯಲ್ಲಿ ಚರ್ಚ್‌ನ ಪ್ರಧಾನ ಧರ್ಮ ಗುರುಗಳಾದ ವಂದನೀಯ ಫಾ||ವಾಲ್ಟರ್ ಡಿ’ಮೆಲ್ಲೊ, ಚರ್ಚ್‌ನ ಆಡಳಿತ ಮಂಡಳಿಯ ಉಪಾದ್ಯಕ್ಷರಾದ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ ಹಾಗೂ ಮುಖ್ಯ ಅತಿಥಿಗಯಾಗಿ ಶಾಸಕ ಹರೀಶ್ ಪೂಂಜಾರವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚರ್ಚ್‌ನ 18 ವಾಳೆಯ ಗುರಿಕಾರರು ಚರ್ಚ್‌ನ ಸಂಘ ಸಂಸ್ಥೆಯ ಅಧ್ಯಕ್ಷರುಗಳು, ಚರ್ಚ್ ಆಯೋಗಗಳ ಸಂಚಾಲಕಿ ಪೌಲಿನ್ ರೇಗೋ, ಕೊನ್ವೆಂಟ್‌ನ ಮುಖ್ಯಸ್ಥರಾದ ಸಿ|ಜೆಸಿಂತಾ ಬಾರೆಟ್ಟೊ ಹಾಗೂ ಭಕ್ತಾದಿಗಳು ಹಾಜರಿದ್ದರು.


ದ್ವಿತೀಯ ಬಾರಿ ವಿಜೇತರಾದ ಶಾಸಕ ಹರೀಶ್ ಪೂಂಜಾರನ್ನು ಸನ್ಮಾನಿಸಿ ಅಭಿನಂದಿಸಲಾಯಿತು ಹಾಗೂ ವನಮಹೋತ್ಸವ ಅಂಗವಾಗಿ 650 ಸಸಿಗಳನ್ನು ವಿತರಿಸಲಾಯಿತು.
ನಿವೃತ್ತ ಶಿಕ್ಷಕ ಪಿ.ಪಿ ಜೋಯ್‌ರವರು ಸ್ವಾಗತಿಸಿ, ಶಿಕ್ಷಕಿ ಕಿನ್ನಿವಾಸ್ ರವರು ವಂದಿಸಿದರು.

ನಿವೃತ್ತ ಶಿಕ್ಷಕಿ ಬೆನೆಡಿಕ್ಟಾ ಡಿಸಿಲ್ಟಾರವರು ಶಾಸಕರ ಪರಿಚಯ ಮಾಡಿದರು.ಕಾರ್ಯಕ್ರಮವನ್ನು ಆರ್ವಿನ್ ಡಿ’ಸೋಜಾರವರು ನಿರೂಪಿಸಿರು.

LEAVE A REPLY

Please enter your comment!
Please enter your name here