ಮುಂಡಾಜೆ: ನಬಾರ್ಡ್ ಅಧಿಕಾರಿಗಳ ಜೊತೆ ವಿವಿಧ ರಾಜ್ಯಗಳ ಸಹಕಾರಿ ಸಂಘಗಳ ಅಧಿಕಾರಿಗಳ ಭೇಟಿ

0

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಬಾರ್ಡ್‌ ಅಧಿಕಾರಿಗಳ ಜೊತೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಚತ್ತೀಸಘಡ ಸಹಕಾರಿ ಬ್ಯಾಂಕುಗಳ ಪ್ರತಿನಿಧಿಗಳು ಇತ್ತೀಚೆಗೆ ಭೇಟಿ ನೀಡಿದರು.

ಸಂಘದ ವ್ಯವಹಾರ ವಿವಿಧ ಗಮನಿಸಿ ವ್ಯಕ್ತಪಡಿಸಿದರು.ಮುಂಡಾಜೆ ಪಾಕ್ಸ ನಬಾರ್ಡನಿಂದ ಎಂಎಸ್ಸಿ ಯೋಜನೆಯಡಿ ನೀಡಿರುವ ಗೋದಾಮು ಕಟ್ಟಡವನ್ನು ಪರಿಶೀಲಿಸಿ, ಇಲ್ಲಿ ಸಂಘ ನಡೆಸುತ್ತಿರುವ ಕೃಷಿ ಯಂತ್ರೋಪಕರಣ ಮಳಿಗೆಯನ್ನು ನೀಕ್ಷಿಸಿದರು.ಸಂತಸ ಸಂಘದ ಅಧ್ಯಕ್ಷ ಜನಾರ್ದನ ಗೌಡ, ನಿರ್ದೇಶಕ ರಾಘವ ಮತ್ತು ವೃತ್ತಿಪರ ನಿರ್ದೇಶಕ ಗಜಾನನವರೆ ಸಂಘದ ಕುರಿತು ಮಾಹಿತಿ ನೀಡಿದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಪ್ರಭು ಸ್ವಾಗತಿಸಿ, ಶಾಖಾ ವ್ಯವಸ್ಥಾಪಕ ಪ್ರಸನ್ನ ಪರಾಂಜಪೆ ವಂದಿಸಿದರು. ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡೆ ಕಾರ್ಯಕ್ರಮ ನಿರ್ವಹಿಸಿದರು. ನಬಾರ್ಡ್ ಸಂಸ್ಥೆಯ ಶೀಲಾ ಎಂ. ಭಂಡಾರ್ಕರ್ ಈ ತಂಡದ ನೇತ್ರತ್ವ ವಹಿಸಿದ್ದರು.

LEAVE A REPLY

Please enter your comment!
Please enter your name here