ಶ್ರೀ ಗುರುದೇವಾ ದತ್ತಾಂಜನೆಯ ಭಜನೆ ಸಮಿತಿಯಿಂದ ಕರಂಬಾರು ಅಂಗನವಾಡಿಗೆ ನೀರಿನ ಟ್ಯಾಂಕಿ ಕೊಡುಗೆ

0

ಕರಂಬಾರು: ಶ್ರೀ ಗುರುದೇವಾ ದತ್ತಾಂಜನೆಯ ಭಜನೆ ಸಮಿತಿ ಸುಮಾರು 25 ವರ್ಷಗಳಿಂದ ವಿದ್ಯಾ ನಿಧಿ ಪುಸ್ತಕ ವಿತರಣೆ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಹತ್ತು ಹಲವಾರು ಸೇವೆಗಳನ್ನು ಮಾಡುಕೊಂಡು ಬಂದಿರುವಂತ ಸಮಿತಿಯಿಂದ ಕರಂಬಾರು ಅಂಗನವಾಡಿ ಕೇಂದ್ರಕ್ಕೆ ನೀರಿನ ಟ್ಯಾಂಕ್ ನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಭಜನೆ ಸಮಿತಿಯ ಅಧ್ಯಕ್ಷ ಹರೀಶ್ ಕಲ್ಲಾಜೆ ಮಾತನಾಡಿ ಸುಮಾರು 25 ವರ್ಷಗಳಿಂದ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ಭಜನಾ ಸಮಿತಿ ಅಗತ್ಯತೆ ಇರುವ ನೀರಿನ ಟ್ಯಾಂಕ್ ಕೊಡುಗೆಯನ್ನು ನೀಡಿದೆ ಮುಂದಿನ ದಿನಗಳಲ್ಲಿ ಈ ಒಂದು ಅಂಗನವಾಡಿ ಕೇಂದ್ರಕ್ಕೆ ಅಭಿವೃದ್ಧಿ ವಿಷಯದಲ್ಲಿ ನಮ್ಮ ಸಂಪೂರ್ಣ ಸಹಕಾರ ಇದೆ ಎಂದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಸಮಿತಿಯ ಅಧ್ಯಕ್ಷೆ ಜಯಶ್ರೀ ಸತೀಶ ಪೂಜಾರಿ, ಪಂಚಾಯ್ ಸದಸ್ಯ ಪ್ರಕಾಶ್ ಹೆಗ್ಡೆ,ಅಂಗನವಾಡಿ ಶಿಕ್ಷಕಿ ಲಾವಣ್ಯ ಭಜನೆ ಸಮಿತಿ ಗೌರವ ಅಧ್ಯಕ್ಷ ಲೋಕೇಶ್ ಕಲ್ಲಾಜೆ ಭಜನೆ ಸಮಿತಿಯ ಪ್ರದಾನ ಕಾರ್ಯದರ್ಶಿ ಯತೀಶ್ ಪೂಜಾರಿ ಸಂಚಾಲಕರಾದ ಅಶೋಕ್ ಟೈಲರ್ ಸಲಹೆ ಸಮಿತಿಯ ಸದಸ್ಯರಾದ ಪ್ರತಪ್ ಪೂಜಾರಿ. ಪ್ರಸಾದ್ ಕುಮಾರ್ ಪದ್ಮನಾಭ ಕುಲಾಲ್ ಬಿಡಿನಬೆಟ್ಟು.ಮಕ್ಕಳ ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here