ಬೆಳ್ತಂಗಡಿಯ ಬಿ.ಕೆ ಧನಂಜಯ ರಾವ್ ರವರ ನೂತನ ಕಚೇರಿ ರಾವ್ ಅಸೋಸಿಯೇಟ್ಸ್ ಉದ್ಘಾಟನೆ

0

ಬೆಳ್ತಂಗಡಿ: ಬೆಳ್ತಂಗಡಿಯ ಖ್ಯಾತ ವಕೀಲರಾದ ಬಿ.ಕೆ ಧನಂಜಯ ರಾವ್ ಇವರ ರಾವ್ ಅಸೋಸಿಯೆಟ್ಸ್ ನೂತನ ಕಚೇರಿ ಬೆಳ್ತಂಗಡಿಯ ಮಹಿಳಾ ವೃಂದದ ಕಟ್ಟಡದಲ್ಲಿ ಮೇ.24 ರಂದು ಉದ್ಘಾಟನೆಗೊಂಡಿತು.


ನೂತನ ಕಚೇರಿಯನ್ನು ದೀಪ ಬೆಳಗಿಸುವ ಮೂಲಕ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ಡೆಟ್ನಾಯ, ವಿಧಾನ ಪರಿಷತ್ ಶಾಸಕ ಕೆ.ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕ ಕೆ.ವಸಂತ ಬಂಗೇರ, ಹಿರಿಯ ನೋಟರಿ ವಕೀಲರಾದ ಭಗೀರಥ ಜಿ, ಸುಬ್ರಹ್ಮಣ್ಯ ಸ್ಥಾನಿಕ ಸಭಾ ಬೆಳ್ತಂಗಡಿ ತಾಲೂಕು ಅಧ್ಯಕ್ಷ ರಾಧಕೃಷ್ಣ ರಾವ್ ನೆರವೇರಿಸಿ, ನೂತನ ಸಂಸ್ಥೆಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ ಎಸ್, ಕ ರ್ಶಿ ಶೈಲೇಶ್ ಠೋಸರ್, ಕುಟುಂಬದ ಹಿರಿಯರಾದ ಬಿ.ಕೆ ಸುಬ್ಬರಾವ್, ನ್ಯಾಯವಾದಿಗಳಾದ ಮನೋಹರ ಕುಮಾರ್ ಇಳಂತಿಲ, ಸಂತೋಷ್ ಕುಮಾರ್, ವಿನಯ ಕುಮಾರ್, ನವೀನ್ ಬಿ.ಕೆ, ಶಿವಕುಮಾರ್, ಮೊದಲಾವದರು ಉಪಸ್ಥಿತರಿದ್ದರು.
ಈ ಸಂದರ್ಭ ಯಕ್ಷಗಾನ ಕಲಾವಿದ ಅಪಘಾತದಲ್ಲಿ ಮಲಗಿದ ಸ್ಥಿತಿಯಲ್ಲಿರುವ ವಿಷ್ಣು ಶರ್ಮ ಹಾಗೂ ಉಜಿರೆಯಲ್ಲಿ ರೋಟರಿ ಕ್ಲಬ್ ವತಿಯಿಂದ ಮಹಿಳೆಗೆ ನಿಮಾರ್ಣವಾಗುತ್ತಿರುವ ಮನೆಗೆ ಧನಂಜಯ ರಾವ್ ಅವರು ಧನ ಸಹಾಯವನ್ನು ಹಸ್ತಾಂತರಿಸಿದರು.

ಬೆಳ್ತಂಗಡಿ ರಾವ್ ಅಸೋಸಿಯೇಟ್ಸ್‌ ನ ವಕೀಲರುಗಳಾದ ಬಿ.ಕೆ ಮಿಹಿರ್ ರಾವ್, ದಿನೇಶ್ ಶೆಟ್ಟಿ, ಆನಂದ ಕುಮಾರ್ ಎಂ.ಸಿ, ಶ್ರೀಮತಿ ದಕ್ಷಾ ಜೈನ್, ಕೃತಿಕಾ ವೈಪನಾ, ಕು| ರೇಷ್ಮಾ, ಸಿಬ್ಬಂದಿಗಳಾದ ಸೌಮ್ಯಲತಾ ಕೆ, ಕು| ಶ್ವೇತಾ ಸಹಕರಿಸಿದರು.

ರಾವ್ ಅಸೋಸಿಯೇಟ್ಸ್‌ ನ ಮಾಲಕ ಹಾಗೂ ಪ್ರಖ್ಯಾತ ನ್ಯಾಯವಾದಿ ಧನಂಜಯ್ ರಾವ್ ಮತ್ತು ಅವರ ಪತ್ನಿ ರಾಜಶ್ರೀ ಧನಂಜಯ್ ರಾವ್ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.

LEAVE A REPLY

Please enter your comment!
Please enter your name here