ಕಾಂಗ್ರೆಸ್ ಸರ್ಕಾರ ರಚನೆ ಹಿನ್ನೆಲೆ: ಕಡಿರುದ್ಯಾವರದಲ್ಲಿ ಸಂಭ್ರಮಾಚರಣೆ

0

ಕಡಿರುದ್ಯಾವರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮತ್ತು ಡಿ.ಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಪ್ರಯುಕ್ತ ಕಡಿರುದ್ಯಾವರದ ಕಾನರ್ಪ ಎಂಬಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಶ್ರೀಮತಿ ಲೋಕೇಶ್ವರಿ ವಿನಯಚಂದ್ರ, ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರಾದ ಲೀಜೋ ಸ್ಕರೀಯ, ವಸಂತ ನಾಯ್ಕ, ನಾರಾಯಣ ಗೌಡ ದೇವಸ್ಯ, ಇಬ್ರಾಹಿಂ, ಶೀನಪ್ಪ ಗೌಡ, ಪುರಂದರ ಗೌಡ, ರಮೇಶ್ ಗೌಡ ಎರುಬಳ್ಳಿ, ಸರೋಜಿನಿ ಮತ್ತು ಜಯರಾಮ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here