ನಿವೃತ್ತ ಪಂಚಾಯತ್ ಕಾರ್ಯದರ್ಶಿ ಹಿರಿಯ ಸಮಾಜ ಸೇವಕ ಜಾರಪ್ಪ ಶೆಟ್ಟಿ ಕಕ್ಕೆಪದವು ನಿಧನ

0

ಬೆಳ್ತಂಗಡಿ : ಗ್ರಾಮ ಪಂಚಾಯತ್ ನಿವೃತ್ತ ಕಾರ್ಯದರ್ಶಿ ಹಿರಿಯ ಸಾಮಾಜಿಕ ಮುಂದಾಳು, ಶ್ರೀ ಪಂಚದುರ್ಗ ಪ್ರೌಢ ಶಾಲೆಯ ಸಂಚಾಲಕ, ಶ್ರೀ ಪಂಚ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ, ಬೆಳ್ತಂಗಡಿ ಬಂಟರ ಸಂಘದ ಮಾಜಿ ನಿರ್ದೇಶಕರಾಗಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಗೈಯ್ಯುತ್ತಿದ್ದ ಹಿರಿಯ ಮುತ್ಸದ್ದಿ ಖಂಡಿಗ ಜಾರಪ್ಪ ಶೆಟ್ಟಿ (85 ವರ್ಷ ) ರವರು ಮೇ.5 ರಂದು ನಿಧನರಾದರು.

ಮೃತರು ಪತ್ನಿ ಶಂಭಾವಿ ,ಪುತ್ರ ವೈದ್ಯರಾದ ಡಾ. ಸತ್ಯಶಂಕರ, ಇಬ್ಬರು ಪುತ್ರಿಯರಾದ ಜ್ಯೋತಿ ಎಸ್. ಶೆಟ್ಟಿ, ವಸುಮತಿ ಶೆಟ್ಟಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here