ಬೆಳ್ತಂಗಡಿಯಲ್ಲಿ ಏಪ್ರಿಲ್ 17ರಂದು ಪ್ರಮುಖ ಅಭ್ಯರ್ಥಿಗಳ ನಾಮಪತ್ರ ಹಿನ್ನಲೆ: ರಸ್ತೆ ಬದಲಾವಣೆ ಮಾಡಿ ಡಿಸಿ ಆದೇಶ

0

ಬೆಳ್ತಂಗಡಿ: ಏಪ್ರಿಲ್ 17 ರಂದು ಬೆಳ್ತಂಗಡಿಯಲ್ಲಿ ಬಿಜೆಪಿ, ಕಾಂಗ್ರೆಸ್ , ಎಸ್ ಡಿ ಪಿ ಐ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನಡೆಯಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರುವ ಹಿನ್ನಲೆಯಲ್ಲಿ ಮುಖ್ಯರಸ್ತೆಯ ಪ್ರಯಾಣಿಕರ ಮಾರ್ಗ ತಹಶೀಲ್ದಾರ್ ಮತ್ತು ವೃತ್ತ ನಿರೀಕ್ಷಕರ ಕೋರಿಕೆ ಹಿನ್ನಲೆಯಲ್ಲಿ ಬದಲಾಯಿಸಲಾಗಿದೆ.

ಉಜಿರೆ ಕಡೆಗೆ ಹೋಗುವವರು ಗುರುವಾಯನಕೆರೆಯಲ್ಲಿ ಮಾರ್ಗ ಬದಲಾಯಿಸಿ ಗೇರುಕಟ್ಟೆ- ಪರಪ್ಪು- ಆದೂರುಪೆರಾಲ್ – ಕೊಯ್ಯೂರು ಕ್ರಾಸ್ ಮೂಲಕ ಸಾಗಿ, ಮಂಗಳೂರಿನತ್ತ ಸಾಗುವವರು ಕೊಯ್ಯೂರು ಕ್ರಾಸ್ – ಆದೂರುಪೆರಾಲ್- ಪರಪ್ಪು- ಗೇರುಕಟ್ಟೆ ಮಾರ್ಗವಾಗಿ ಸಾಗಲು ಅನುಮತಿ ವೃತ್ತನಿರೀಕ್ಷಕರು, ತಹಶೀಲ್ದಾರ್ ಮಾಡಿರುವ ಮನವಿಗೆ ಜಿಲ್ಲಾಧಿಕಾರಿ ಸ್ಪಂದನೆ ನೀಡಿದ್ದು ಮಂಗಳೂರಿನತ್ತ ಸಾಗುವವರು ಕೊಯ್ಯೂರು ಕ್ರಾಸ್ – ಆದುರುಪೆರಾಲ್- ಪರಪ್ಪು- ಗೇರುಕಟ್ಟೆ ಮಾರ್ಗವಾಗಿ ಸಾಗಲು ಅನುಮತಿ ನೀಡಲಾಗಿದೆ.

ಉಜಿರೆ ಕಡೆಗೆ ಸಾಗುವವರು ಗುರುವಾಯನಕೆರೆಯಲ್ಲಿ ಉಪ್ಪಿನಂಗಡಿ ಮಾರ್ಗವಾಗಿ ಸಾಗಿ ಗೇರುಕಟ್ಟೆ- ಪರಪ್ಪು- ಆದುರುಪೆರಾಲ್- ಕೊಯ್ಯೂರು ಕ್ರಾಸ್ ಮೂಲಕ ಸಾಗಲು ಅನುಮತಿ ನೀಡಲಾಗಿದೆ.

ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಮಾರ್ಗ ಬದಲಾವಣೆ ಜಿಲ್ಲಾಧಿಕಾರಿಗಳು ಸೂಚಿಸಿರುವಂತೆ ಮಾರ್ಗ ಬದಲಾವಣೆಯನ್ನು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಮಾರ್ಗ ಬದಲಾವಣೆ ಮಾಡಿ ಆದೇಶಿಸಲಾಗಿದೆ.

LEAVE A REPLY

Please enter your comment!
Please enter your name here