ಕುವೆಟ್ಟು ಶಕ್ತಿನಗರದಲ್ಲಿ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸೆಲ್ವರಾಜ್ ಮೃತ್ಯು

0

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಶಕ್ತಿನಗರದಲ್ಲಿ ಎ.೧೦ರಂದು ರಾತ್ರಿ ೮.೨೫ರ ವೇಳೆಗೆ ಕಂಟೈನರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರರಾಗಿದ್ದ
ಕೇರಳ ಕೊಲ್ಲಂ ವರನೆಲ್ಲೂರ್‌ನ ಸೆಲ್ವರಾಜ್( ೫೧ವ) ಎಂಬವರು ಮೃತಪಟ್ಟ ಘಟನೆ ನಡೆದಿದೆ.
ಘಟನೆಯ ವಿವರ:
ಎ.೧೦ರಂದು ರಾತ್ರಿ ೮.೨೫ರ ವೇಳೆಗೆ ಬೆಂಗಳೂರು ಗ್ರಾಮಾಂತರ ನೆಲಮಂಗಲ ಇಂದಿರಾನಗರದ ಚಂದ್ರಪ್ಪ ಬಿಲ್ಡಿಂಗ್‌ನ ಕಂಬಯ್ಯರವರ ಪುತ್ರ ಹನುಮಂತರಾಯಪ್ಪರವರು ಕಂಟೈನರ್ ಲಾರಿಯನ್ನು ಕಾರ್ಕಳ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿಕೊಂಡು ಬಂದು ಲಾರಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಬಹಿರ್ದೆಸೆಗೆಂದು ಹೋಗಿ ವಾಪಸು ಲಾರಿಯ ಬಳಿಗೆ ನಡೆದುಕೊಂಡು ಬರುತ್ತಿರುವಾಗ ದ್ವಿಚಕ್ರ ವಾಹನವೊಂದರ ಸವಾರ ಕೇರಳ ಕೊಲ್ಲಂ ವರನೆಲ್ಲೂರ್‌ನ ಸೆಲ್ವರಾಜ್( ೫೧ವ) ಎಂಬವರು ಸಹಸವಾರ ಲೊಕೇಶ್ ಎಂಬವರನ್ನು ಕುಳ್ಳಿರಿಸಿಕೊಂಡು ಕಾರ್ಕಳ ಕಡೆಯಿಂದ ಗುರುವಾಯನಕೆರೆ ಕಡೆಗೆ ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದಿದ್ದರು. ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಹನುಮಂತರಾಯಪ್ಪರವರ ಕಂಟೈನರ್ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ಚಿಚಕ್ರ ವಾಹನ ಸವಾರ ಸೆಲ್ವರಾಜ್‌ರವರು ಸಹಸವಾರ ಲೊಕೇಶ್‌ರವರೊಂದಿಗೆ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದ ಪರಿಣಾಮ ಲೋಕೇಶ್‌ರವರ ತಲೆಯ ಹಿಂಭಾಗಕ್ಕೆ ಗಾಯವಾಗಿದೆ. ಸೆಲ್ವರಾಜ್‌ರವರ ತಲೆಯ ಹಿಂಭಾಗಕ್ಕೆ ಗಾಯ ಹಾಗೂ ಎಡಕೋಲು ಕಾಲಿಗೆ ಗುದ್ದಿದ ಗಾಯವುಂಟಾಗಿತ್ತು. ಕೂಡಲೇ ಅವರನ್ನು ಆಂಬುಲೆನ್ಸ್‌ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ವೈದ್ಯರು ಗಾಯಾಳುಗಳನ್ನು ಪರೀಕ್ಷಿಸಿದ್ದು ಆ ಪೈಕಿ ಗಾಯಾಳು ಸೆಲ್ವರಾಜ್‌ರವರು ಆ ವೇಳೆಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಇನ್ನೋರ್ವ ಗಾಯಾಳು ಲೊಕೇಶ್(೨೫)ರವರನ್ನು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹನುಮಂತರಾಯಪ್ಪ ನೀಡಿದ ದೂರಿನಂತೆ ದ್ವಿಚಕ್ರ ವಾಹನ ಸವಾರರಾಗಿದ್ದ ಮೃತ ಸೆಲ್ವರಾಜ್ ವಿರುದ್ಧ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here